ಮನೆ ರಾಜ್ಯ ಏಕಾಗ್ರತೆಗೆ ಸಂಗೀತ ಸಹಕಾರಿ: ಶ್ವೇತಾ ಮಡಪ್ಪಾಡಿ

ಏಕಾಗ್ರತೆಗೆ ಸಂಗೀತ ಸಹಕಾರಿ: ಶ್ವೇತಾ ಮಡಪ್ಪಾಡಿ

0

ಮೈಸೂರು(Mysuru): ವಿಧ್ಯಾರ್ಥಿಗಳಲ್ಲಿ ಏಕಾಗ್ರತೆಗೆ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಲು ಸಂಗೀತ ಸಹಕಾರಿಯಾಗುತ್ತದೆ ಎಂದು ಡಾ. ಶ್ವೇತಾ ಮಡಪ್ಪಾಡಿ ಅಭಿಪ್ರಾಯಪಟ್ಟರು.

ರಾಮಾನುಜ ರಸ್ತೆಯಲ್ಲಿರುವ ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್  ತಾಲವಾದ್ಯ ಪ್ರತಿಷ್ಠಾನದ ವತಿಯಿಂದ ಇಂದು ಪದ್ಮವಿಭೂಷಣ  ಡಾ.ಗಂಗೂಬಾಯಿ ಹಾನಗಲ್ ರವರ 13ನೇ ಬೆಲೆ ಸ್ಮರಣಾ ಕಾರ್ಯಕ್ರಮದಲ್ಲಿ ಡಾ.ಗಂಗೂಬಾಯಿ ಹಾನಗಲ್ ರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ಕರ್ನಾಟಕ ಸಂಗೀತದ ಕೇಂದ್ರ ಸ್ಥಾನದಂತಿರುವ ಮೈಸೂರು ನಗರದಲ್ಲಿಂದು ಹಿಂದೂಸ್ತಾನಿ ಸಂಗೀತದ ಮೇರು ಕಲಾವಿದರೊಬ್ಬರ ಸಂಸ್ಮರಣೆ ಮಾಡುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿ ತೋರುತ್ತಿದೆ ಎಂದು  ಹೇಳಿದರು.

ಎಲ್ಲಾ ಕಲೆಗಳೂ ಬದುಕಿಗೆ ಸರ್ವೋತ್ಕೃಷ್ಟ ಸಂತೋಷ ನೀಡಬಲ್ಲವೇ ಆಗಿವೆ. ಆದರೆ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೋಡಿಗೆ ಒಮ್ಮೆ ಒಳಗಾದರೆ ಅದರಿಂದ ಹೊರ ಬರುವುದಕ್ಕೆ ಸಾಧ್ಯವಿಲ್ಲದಷ್ಟು ಅದು ಮನಸ್ಸನ್ನು ಆಕ್ರಮಿಸಿಕೊಂಡು ಬಿಡುತ್ತದೆ ಎಂದು ಹೇಳಿದರು.

ಗಂಗೂಬಾಯಿಯವರ ತಾಯಿ ಸ್ವತಃ ಕರ್ನಾಟಕ ಶೈಲಿಯ ಅದ್ಭುತ ಗಾಯಕಿಯಾಗಿದ್ದರೂ ಮಗಳಿಗೆ ಹಿಂದೂಸ್ತಾನಿ ಗಾಯಕಿಯಾಗಿಸಬೇಕೆಂಬ ಹುಚ್ಚು ಹತ್ತಿಸಿಕೊಂಡವರಂತೆ. ಕರ್ನಾಟಕ ಸಂಗೀತದ ಪರಿಣಾಮ ಗಂಗೂಬಾಯಿಯವರ ಹಾಡಿಗೆ ತೊಂದರೆ ಉಂಟು ಮಾಡಬಾರದೆಂದು ತಾನು ಹಾಡುವುದನ್ನೇ ನಿಲ್ಲಿಸಿದ ಮಹಾತಾಯಿಯಂತೆ . ಗಂಗೂಬಾಯಿಯವರ ಸಾಧನೆ ಅವರ ತಾಯಿಯ ಕನಸೂ ಆಗಿತ್ತು ಎಂದು ತಿಳಿಸಿದರು.

ಮಕ್ಕಳಲ್ಲಿ  ಸಂಗೀತ ಸಾಹಿತ್ಯದ ಆಸಕ್ತಿಯನ್ನು ಹುಟ್ಟುಹಾಕಿ ಪೋಷಿಸುವಲ್ಲಿ ಹೆತ್ತವರ ಪಾತ್ರ ಎಷ್ಟಿರುತ್ತದೆಂಬುದನ್ನು  ಗಂಗೂಬಾಯಿಯವರ ತಾಯಿ ಸಾಬೀತು ಮಾಡಿದ್ದಾರೆ. ಸಂಗೀತದ ಶ್ರೇಷ್ಠ ಗೌರವಗಳೆಲ್ಲ ಈ ಪುಟ್ಟ ಜೀವದ ಮಹಾನ್ ಸಾಧಕಿಯ ಮಡಿಲು  ಸೇರಿದ ಕ್ರಮವೇ ರೋಮಾಂಚಕ. ಹೀಗಾಗಿ ಇಂಥ ಮೇರು ಗಾಯಕಿಯೊಬ್ಬರನ್ನು ನೆನಪಿಸಿಕೊಳ್ಳುವುದು ಅತ್ಯಂತ ಗೌರವಯುತ ಕೆಲಸ ಎಂದು ಹೇಳಿದರು.

ಸಂಗೀತ ಮತ್ತು ಪ್ರದರ್ಶಕ ವಿಶ್ವವಿದ್ಯಾಲಯಕ್ಕೆ ಗಂಗೂಬಾಯಿಯವರ ಹೆಸರನ್ನಿರಿಸಿದೆ ರಾಜ್ಯ ಸರಕಾರ. ಈ ವಿಶ್ವವಿದ್ಯಾಲಯವನ್ನು ಗಟ್ಟಿಯಾಗಿ ಬೆಳೆಯಬೇಕಾದ ಜವಾಬ್ದಾರಿಯನ್ನು ಸರಕಾರ ನಿರ್ವಹಿಸಬೇಕಾಗಿದೆ. ಗಂಗೂಬಾಯಿಯವರ ಸಂಗೀತ ಪರಂಪರೆಯನ್ನು ಮುಂದಿನ ಪೀಳಿಗೆಗೆ ದಾಟಿಸಬೇಕಾದ ಜವಾಬ್ದಾರಿಯೊಂದು ನಮ್ಮ ಮುಂದಿದೆ. ಇಂಥದ್ದೊಂದು ಕಾರ್ಯಕ್ರಮ ನಮ್ಮಂಥ ಯುವ ಮನಸ್ಸುಗಳನ್ನು ಇಂಥ ಆರೋಗ್ಯಯುತ ಚಿಂತನೆಗಳಿಗೆ ಪ್ರೇರೇಪಿಸಬಲ್ಲುದು ಎಂದರು.

ನಂತರ ಮಾತನಾಡಿದ  ನಗರಪಾಲಿಕೆ ಸದಸ್ಯ ಮಾ ವಿ ರಾಮ್ ಪ್ರಸಾದ್, ಗಂಗೂಬಾಯಿ ಹಾನಗಲ್ ರವರ ಹೆಸರನ್ನು  ರಾಜ್ಯದಲ್ಲಿ ದೇಶದಲ್ಲಿ ಕೇಳದೆ ಇರುವವರೇ ಇಲ್ಲ  ನಮ್ಮ ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಈಗಾಗಲೇ ಅವರ ಹೆಸರಿನಲ್ಲಿ 1ಸಂಗೀತ ವಿಶ್ವವಿದ್ಯಾನಿಲಯವೇ ಪ್ರಾರಂಭಿಸಲಾಗಿದೆ. ಇವರು ಸಂಗೀತ ಕ್ಷೇತ್ರಕ್ಕೆ ಇವರ ಕೊಡುಗೆ ಅಪಾರವಾದುದು ಶಿಷ್ಯರು ಲಕ್ಷಾಂತರ ಮಂದಿ ಇವರ ಶಿಷ್ಯರಾಗಿ ಬೆಳೆದಿದ್ದಾರೆ ಎಂದು ತಿಳಿಸಿದರು.

ಗಂಗೂಬಾಯಿ ಹಾನಗಲ್ ರವರು ಕಚೇರಿ ನಡೆಸುತ್ತಿದ್ದ ಸಂದರ್ಭದಲ್ಲಿ  ಕಲೆ ಎನ್ನುವುದು ಸೇವೆಗೆ ಮೀಸಲಾಗಿತ್ತು ಇಂದು ಅದು ವ್ಯಾಪಾರೀಕರಣವಾಗುತ್ತಿದೆ ,ಸರ್ಕಾರ ಕಳೆಗೋಸ್ಕರ ಇನ್ನೂ ಹೆಚ್ಚಿನ ಪ್ರೋತ್ಸಾಹ ನೀಡಬೇಕಾಗುತ್ತದೆ  ವಿದ್ಯಾರ್ಥಿಗಳಿಗೆ ಹಿಂದೆ ಶಾಲೆಯಲ್ಲಿ ಒಬ್ಬರು ಸಂಗೀತದ ಉಪಾಧ್ಯಾಯರು ಇರುತ್ತಿದ್ದರು. ಈಗ ಕಾಣೆಯಾಗಿದೆ ಆದ್ದರಿಂದ ಚಿಕ್ಕ ವಯಸ್ಸಿನಿಂದಲೇ ಮಕ್ಕಳಿಗೆ ಕಲೆಯನ್ನು ಪ್ರೋತ್ಸಾಹಿಸಬೇಕೆಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ವಿದ್ವಾನ್ ಎಂ ಎಸ್ ಜಯರಾಮ್, ಪಂಡಿತ್ ಡಾ.ಶಿವಕುಮಾರ್, ವಿದ್ವಾನ್ ವಿಶ್ವನಾಥ್, ಪ್ರಸಾದ್ ಸ್ಕೂಲ್ ಆಫ್ ರಿದಮ್ಸ್ ಸಂಸ್ಥಾಪಕರಾದ ಡಾ.ಸಿ ಆರ್ ರಾಘವೇಂದ್ರ ಪ್ರಸಾದ್, ವಿದ್ವಾನ್ ನಾಗೇಂದ್ರ ಪ್ರಸಾದ್, ಅಖಿಲ ಭಾರತೀಯ ಗ್ರಾಹಕ ಪಂಚಾಯತ್ ಅಧ್ಯಕ್ಷರಾದ ರವಿಶಂಕರ್, ತಬಲಾ ಜಗದೀಶ್, ರೇಖಾ ರಾಜು, ಸುಚೀಂದ್ರ, ಗಾಯಕರಾದ ಪುರುಷೋತ್ತಮ್ ಹಾಗೂ ಇನ್ನಿತರರು ಹಾಜರಿದ್ದರು

ಹಿಂದಿನ ಲೇಖನಕನ್ನಡದಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಡಾ. ವೀರೇಂದ್ರ ಹೆಗ್ಗಡೆ
ಮುಂದಿನ ಲೇಖನಸಿದ್ದರಾಮಯ್ಯ ಅರ್ಜಿ ಹಾಕಿ ಗೆದ್ದು ಬರವಂಥ ಕ್ಷೇತ್ರ ಹುಡುಕುತ್ತಿದ್ದಾರೆ: ಜಿ.ಟಿ.ದೇವೇಗೌಡ