ಮನೆ ರಾಜ್ಯ ಗಾಬರಿ ಪಡುವಂತಹದ್ದೇನಿಲ್ಲ. ಗಟ್ಟಿಮುಟ್ಟಾಗಿದ್ದೇನೆ: ಸಿದ್ದರಾಮಯ್ಯ

ಗಾಬರಿ ಪಡುವಂತಹದ್ದೇನಿಲ್ಲ. ಗಟ್ಟಿಮುಟ್ಟಾಗಿದ್ದೇನೆ: ಸಿದ್ದರಾಮಯ್ಯ

0

ವಿಜಯನಗರ: ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಶನಿವಾರ ಮಧ್ಯಾಹ್ನ ಕೂಡ್ಲಿಗಿಯಲ್ಲಿ ಕಾರು ಹತ್ತುವಾಗ ಕುಸಿದು ಬಿದ್ದಿದ್ದರು. ಇದರಿಂದ ಕೆಲ ಹೊತ್ತು ಆತಂಕ ಸೃಷ್ಟಿಯಾಗಿತ್ತು. ಈ ಬಗ್ಗೆ ಟ್ವೀಟ್ ಮೂಲಕ ಸ್ವತಃ ಸ್ಪಷ್ಟನೆ ನೀಡಿರುವ ಸಿದ್ದರಾಮಯ್ಯ ಅವರು ಗಾಬರಿ ಪಡುವಂತಹದ್ದೇನಿಲ್ಲ. ಗಟ್ಟಿಮುಟ್ಟಾಗಿದ್ದೇನೆ ಎಂದು ಹೇಳಿದ್ದಾರೆ.

Join Our Whatsapp Group

ನಿತ್ಯ ಅಡ್ಡಾಡುವ ಕಾರು ಬದಲಾಗಿರುವ ಕಾರಣ ಈ ರೀತಿ ಘಟನೆ ನಡೆದಿದೆ. ಸೈಡ್ ಸ್ಟೆಪ್ ಇಲ್ಲದ ಕಾರಿನಲ್ಲಿ ಕಾಲು ಜಾರಿ ಹಿಂದಕ್ಕೆ ಮುಗ್ಗರಿಸಿದ್ದೇನಷ್ಟೇ. ಈಗ ಆರಾಮಾಗಿದ್ದೇನೆ ಎಂದು ಹೇಳಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ನಿಂದ ಅವರ ಅಭಿಮಾನಿಗಳಲ್ಲಿ ನಿರಾಳ ಭಾವ ಮೂಡಿದೆ.

ಶನಿವಾರ ಮಧ್ಯಾಹ್ನ ಕಾಂಗ್ರೆಸ್ ಚುನಾವಣಾ ಪ್ರಚಾರಕ್ಕೆ ತೆರಳಿದ್ದಾಗ ವಿಜಯನಗರ ಜಿಲ್ಲೆಯ ಕೂಡ್ಲಿಗಿಯ ಹೆಲಿಪ್ಯಾಡ್ನಲ್ಲಿ ಸಿದ್ದರಾಮಯ್ಯ ಬಿದ್ದಿದ್ದರು. ಹೆಲಿಪ್ಯಾಡ್ ನಲ್ಲಿ ಕಾರು ಹತ್ತಿ ಜನರತ್ತ ಕೈಬೀಸಿ ವಾಪಸ್ ಇಳಿಯುವಾಗ ಸಿದ್ದರಾಮಯ್ಯ ಬಿದ್ದಿದ್ದರು. ತಕ್ಷಣವೇ ಡೋರ್ ಬಳಿಯೇ ನಿಂತಿದ್ದ ಅವರ ಅಂಗರಕ್ಷಕರು ಸಿದ್ದರಾಮಯ್ಯ ಅವರನ್ನು ಸೀಟ್ ನಲ್ಲಿ ಕೂರಿಸಿ, ನೀರು ಕುಡಿಸಿ, ಉಪಚಾರ ಮಾಡಿದ್ದರು.

ಈ ಘಟನೆ ನಡೆದ ಬಳಿಕ ಸಿದ್ದರಾಮಯ್ಯ ಕೂಡ್ಲಿಗಿಯಲ್ಲಿ ನಡೆದ ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಭಾಗಿಯಾಗಿದ್ದರು. ಕೂಡ್ಲಿಗಿಯ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಪರ ಸಿದ್ದರಾಮಯ್ಯ ಪ್ರಚಾರ ನಡೆಸಿದ್ದರು. ಈ

ಹಿಂದಿನ ಲೇಖನನೀನೇನು ಬೆತ್ತಲೆ ಜಗತ್ತು ಬರೆಯೋದು. ನಿನ್ನನ್ನು ನಾನೇ ಬೆತ್ತಲೆ ಮಾಡುತ್ತೇನೆ: ಪ್ರತಾಪ್ ಸಿಂಹ ವಿರುದ್ಧ ಎಚ್ ವಿಶ್ವನಾಥ್ ಟೀಕೆ
ಮುಂದಿನ ಲೇಖನಪ್ರೀತಿಯಿಂದ ಒತ್ತಡ, ಕೋಪ ಇತರೆ ಆರೋಗ್ಯ ಸಮಸ್ಯೆಗಳು ದೂರ