ಬೆಂಗಳೂರು: ಪ್ರತಿ ವ್ಯಕ್ತಿ ಮಾನಸಿಕವಾಗಿ ಹಾಗೂ ದೈಹಿಕವಾಗಿ ಆರೋಗ್ಯವಾಗಿರಲು ಯಾವುದಾದರೂ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಶ್ವವಾಣಿ ಕನ್ನಡ ಪತ್ರಿಕೆಯ 9 ನೇ ವಾರ್ಷಿಕೋತ್ಸವ ಪ್ರಯುಕ್ತ ಆಯೋಜಿಸಿದ್ದ ಅಂತರ್ ಮುದ್ರಣ ಮಾಧ್ಯಮ ವಿ ವಿ ಕಪ್ 2024
ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಹೆಚ್ಚು ಜನಪ್ರಿಯವಾದ ಪಂದ್ಯ ಹಾಗೂ ಹೆಚ್ಚು ಶ್ರೀಮಂತ ಪಂದ್ಯವೆಂದು ಕ್ರಿಕೆಟ್ ಖ್ಯಾತಿ ಪಡೆದಿದೆ. ಆರೋಗ್ಯ ಕಾಪಾಡಿಕೊಳ್ಳಲು ದೈಹಿಕ ಚಟುವಟಿಕೆ ಅಗತ್ಯ ಬೊಜ್ಜು ಬೆಳೆಸಿಕೊಳ್ಳಬೇಡಿ ಎಂದು ಮುಖ್ಯಮಂತ್ರಿಗಳು ಸಲಹೆ ನೀಡಿದರು.
ಸೋಲು ಗೆಲುವು ಸಹಜ
ಸೋಲು ಗೆಲುವು ಯಾವುದೇ ಪಂದ್ಯದಲ್ಲಿ ಸಹಜ. ಗೆದ್ದವರಿಗೂ, ಸೋತವರಿಗೂ ಶುಭಾಶಯ ಹೇಳಬೇಕು. ಪಂದ್ಯಾವಳಿಯಲ್ಲಿ ಭಾಗವಹಿಸಿದ ಆರು ತಂಡಗಳಿಗೂ ಅಭಿನಂದಿಸಿದರು.
ಕ್ರಿಕೆಟ್ ವೀಕ್ಷಕ
ನಾನು ಕ್ರಿಕೆಟ್ ಆಡುವುದಿಲ್ಲ. ಆದರೆ ಕ್ರಿಕೆಟ್ ವೀಕ್ಷಕ. ಟೆಸ್ಟ್ ಪಂದ್ಯಾವಳಿಯನ್ನು ನೋಡಿ ಅಭ್ಯಾಸವಿದೆ ಎಂದರು. ಸಮಯವಿದ್ದರೆ ಬೆಂಗಳೂರಿನಲ್ಲಿ ಕ್ರಿಕೆಟ್ ನೋಡುತ್ತೇನೆ ಎಂದರು.
ವಿಶ್ವೇಶ್ವರ ಭಟ್ ಅವರು ಸ್ವಂತ ಪತ್ರಿಕೆ ಪ್ರಾರಂಭಿಸಿ ಒಂಭತ್ತು ವರ್ಷಗಳಾಗಿವೆ. ಅದರ ಭಾಗವಾಗಿ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಿದ್ದು, ಇದನ್ನು ಉದ್ಘಾಟಿಸಲು ಆಹ್ವಾನ ನೀಡಿದ್ದಕ್ಕಾಗಿ ಧನ್ಯವಾದಗಳನ್ನು ಹೇಳಿದರು.
ವಿಶ್ವವಾಣಿ ಪತ್ರಿಕೆ ಸಂಪಾದಕ, ವಿಶ್ವೇಶ್ವರ ಭಟ್, ಶಾಸಕ ಪ್ರದೀಪ್ ಈಶ್ವರ್, ಪಿ.ಇ. ಎಸ್ ವಿದ್ಯಾಸಂಸ್ಥೆಯ ಕುಲಪತಿ ಸೂರ್ಯಪ್ರಸಾದ್, ಮೊದಲಾದವರು ಉಪಸ್ಥಿತರಿದ್ದರು
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರೈಸಿದ್ದು ವರ್ಷ ಸಾಧಿಸಿದ್ದು ಶೂನ್ಯ – ಬಿವೈವಿ
ಮೋದಿ ನೇತೃತ್ವದ BJP 430 ಸೀಟ್ ಗೆಲ್ಲುತ್ತೆ ಎಂದ ಚೀನಾ….
ನಮ್ಮ ಹೆಮ್ಮೆಯ ಮೈಸೂರು
ಒಂದು ಅದ್ಭುತ. ಫುಟ್ಬಾಲ್ನ ಸಂಯೋಜನೆ..
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.