ಮನೆ ವ್ಯಕ್ತಿತ್ವ ವಿಕಸನ ನಿಮ್ಮ ಮನಸ್ಸನ್ನು ಸತತವಾಗಿ ಶುಚಿಗೊಳಿಸಿ

ನಿಮ್ಮ ಮನಸ್ಸನ್ನು ಸತತವಾಗಿ ಶುಚಿಗೊಳಿಸಿ

0

ಓರ್ವ ಯುವಕ ಸ್ನಾತಕೋತರ ಪದವಿ ಶಿಕ್ಷಣ ಮುಗಿಸಿದ ಬಳಿಕ ಉತ್ತಮ ಉದ್ಯೋಗಕ್ಕಾಗಿ ಬೇಟೆ ಆರಂಭಿಸಿದರು. ಆತ ತನ್ನ ಕ್ಷೇತ್ರದ ಶಾಸಕರನ್ನು ಭೇಟಿಯಾಗಿ ಮಂತ್ರಿಗೆ ಶಿಫಾರಸ್ಸು ಮಾಡುವಂತೆ ಕೋರಿದನು. ಶಾಸಕ ಅದಕ್ಕೂಪ್ಪಿ  ಮಂತ್ರಿಯ ಮನೆಗೆ ಕರೆದೊಯ್ಯುವುದಾಗಿ ಆ ಹುಡುಗನಿಗೆ ಭರವಸೆ ನೀಡಿದರು. ಮಾರ್ಗಮಧ್ಯೆ ಆ ಹುಡುಗನಿಂದ ಏನೋ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಶಾಸಕ ಅವನ ಕಾಲುಚೀಲಗಳು ಬಹಳ ಕೊಳಕಾಗಿರುವುದನ್ನು ಗುರುತಿಸಿದನು.ಆಗ ಆತನಿಗೆ ತನ್ನ ಮನೆಗೆ ವಾಪಸಾಗಿ ಕಾಲುಚೀಲ ಬದಲಿಸಿಕೊಂಡು ಮರುದಿನ ಬರುವಂತೆ ಶಾಸಕರು ಸೂಚಿಸಿದರು. ಯುವಕ  ಒಪ್ಪಿ  ಅದರಂತೆ ಮಾರನೆಯ ದಿನ ಮತ್ತೆ ಬಂದನು.ಆಗಲೂ ಆ ಹುಡುಗನ ಕಡೆಯಿಂದ ಕೆಟ್ಟವಾಸನೆ ಬರುತ್ತಿರುವುದನ್ನು ಕಂಡು ಶಾಸಕ ಅವಕ್ಕಾದರು.ಈ ಬಾರಿ ಅವರು ಸಿಟ್ಟಾಗಿ  “ನಾನು ನಿನಗೆ ಕಾಲುಚೀಲ ಬದಲಿಸಲು ತಿಳಿಸಿರಲಿಲ್ಲವೇ” ಎಂದು ಪ್ರಶ್ನಿಸಿದರು.

Join Our Whatsapp Group

   ಅದಕ್ಕೆ ಆ ಹುಡುಗ ಹೀಗೆ ಉತ್ತರಿಸಿದ್ದನು ನಾನು “ಹೊಸ ಕಾಲು ಚೀಲ  ಖರೀದಿಸಿ ಅವುಗಳನ್ನೇ ತೊಟ್ಟುಕೊಂಡಿದ್ದೇನೆ. ಇಗೋ ನೋಡಿ ಅದರ ಬಿಲ್ ಇಲ್ಲಿದೆ. ನೀವು ನನ್ನನ್ನು ನಂಬಲಾರಿರೆಂದು ನನಗೆ ಗೊತ್ತಿತ್ತು.  ಅದರಿಂದಲೇ……”

  ಪ್ರಶ್ನೆಗಳು

1. ಆ ಯುವಕ  ಶಾಸಕರಿಗೆ ಮುಂದೆ ಏನು ಹೇಳಿರಬಹುದು?

2. ಈ ಕಥೆಯ ಪರಿಣಾಮವೇನು?

 ಉತ್ತರಗಳು

1. “ನಾನು ನಿಮಗೆ ತೋರಿಸಲೆಂದೆ ಹಳೆಯ ಕಾಲುಚೀಲಗಳನ್ನು ಕೂಡಾ ತಂದಿದ್ದೇನೆ” ಎಂದು ಅವನು ಹೇಳಿದನು.

2. ನಾವು ನಮ್ಮ ಅಸಂತೋಷದ ಮನಸ್ಸನ್ನು ಈ ಕೊಳಕು ಕಾಲು ಚೀಲಗಳಿಗೆ ಹೋಲಿಸಬಹುದು. ನಿಮ್ಮ ಮನಸ್ಸು  ಅಸಂತುಷ್ಟವಾಗಿದ್ದರೆ ನೀವು ಸ್ವರ್ಗದಲ್ಲಿದ್ದರೂ ಕೂಡ ಶೋಕತಪ್ತ ಭಾವನೆಗಳೇ ಹೊರಹೂಮ್ಮತ್ತೆವೆ.ನಾವುಗಳು ಮನಸ್ಸನ್ನು ಪ್ರಾರ್ಥನೆ ಮತ್ತು ಧ್ಯಾನ್ಯದಿಂದ ಶುಚಿಗೊಳಿಸಿದಿದ್ದರೆ ನಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನುಬದಲಿಸುವುದು ಬಹಳ ಕಷ್ಟವಾಗುತ್ತದೆ.

ಹಿಂದಿನ ಲೇಖನಕೇರಳದ ದಂಪತಿ, ಸ್ನೇಹಿತೆಯ ಶವ ಅರುಣಾಚಲ ಪ್ರದೇಶದ ಹೋಟೆಲ್ ನಲ್ಲಿ ಅನುಮಾನಾಸ್ಪದವಾಗಿ‌ ಪತ್ತೆ
ಮುಂದಿನ ಲೇಖನಸಿಲಿಕಾನ್ ಸಿಟಿಯಲ್ಲಿ ಬಿಸಿಗಾಳಿ  ಹೆಚ್ಚಳ: ಹವಾಮಾನ ಇಲಾಖೆ