ಮನೆ ದಾಂಪತ್ಯ ಸುಧಾರಣೆ ದಾಂಪತ್ಯ ಜೀವನ ಚೆನ್ನಾಗಿ ಸಾಗಬೇಕೆಂದರೆ ಈ ವಿಷಯ ನೆನಪಿಟ್ಟುಕೊಳ್ಳಿ

ದಾಂಪತ್ಯ ಜೀವನ ಚೆನ್ನಾಗಿ ಸಾಗಬೇಕೆಂದರೆ ಈ ವಿಷಯ ನೆನಪಿಟ್ಟುಕೊಳ್ಳಿ

0

ಮದುವೆಯಾದವರು ತಮ್ಮ ದಾಂಪತ್ಯ ಜೀವನ ಚೆನ್ನಾಗಿ ಸಾಗಬೇಕೆಂದರೆ ಕೆಲವೊಂದು ವಿಷ್ಯಗಳ ಕಡೆ ಗಮನ ಹರಿಸುವುದು ಮುಖ್ಯ.

ಯಾವುದೇ ಸಂಬಂಧದಲ್ಲಿ ಜಗಳಗಳು ಇದ್ದೇ ಇರುತ್ತವೆ. ಅವುಗಳಲ್ಲು ಗಂಡ-ಹೆಂಡತಿಯ ನಡುವೆ ಸಾಕಷ್ಟು ವಿಷ್ಯಗಳು ಬರುತ್ತವೆ ಹೋಗುತ್ತವೆ. ಹಾಗಂತ ಎಲ್ಲವನ್ನು ಸೀರಿಯಸ್ಸಾಗಿ ತೆಗೆದುಕೊಂಡರೆ ಸಂಬಂಧವೇ ಹಾಳಾಗಬಹುದು. ಮದುವೆಯಾದ ನಂತರ ಪ್ರತಿಯೊಬ್ಬರು ಈ ಕೆಲವು ವಿಷ್ಯಗಳನ್ನು ನೆನಪಿಟ್ಟುಕೊಳ್ಳಬೇಕು. ಅವುಗಳಂತೆ ನಡೆದರೆ ನಿಮ್ಮ ಜೀವನ ಸುಖಕರವಾಗಿರುವುದು.

ಸುಖಾಸುಮ್ಮನೆ ಕೋಪ ಮಾಡಿಕೊಳ್ಳುವುದು

ವೈವಾಹಿಕ ಜೀವನದಲ್ಲಿ ಪತಿ-ಪತ್ನಿಯರ ನಡುವೆ ಸಣ್ಣ ಪುಟ್ಟ ಮನಸ್ತಾಪಗಳು ಬಂದೇ ಬರುತ್ತವೆ. ಕೋಪದಲ್ಲಿ ಪರಸ್ಪರ ಕೆಟ್ಟದಾಗಿ ಕೂಗಲು ಪ್ರಾರಂಭಿಸುತ್ತಾರೆ ಮುಂದೆ ಅದುವೇ ದೊಡ್ಡ ಸಮಸ್ಯೆಯಾಗುತ್ತದೆ. ಇದನ್ನು ಸುಲಭವಾಗಿ ಪರಿಹರಿಸಲು ಸಾಧ್ಯವಾಗುವುದಿಲ್ಲ. ಒಬ್ಬರು ಇನ್ನೊಬ್ಬರ ಮೇಲೆ ಕಿರುಚಾಡಿ ಮಸ್ಸಿಗೆ ನೋವುಂಟು ಮಾಡಿ ನಂತರ ಗೋಳಾಡುವ ಬದಲು, ನಿಮ್ಮ ತೊಂದರೆಗಳ ಬಗ್ಗೆ ಪರಸ್ಪರ ಮಾತನಾಡಿ ಬಗೆಹರಿಸಿಕೊಳ್ಳಬಹುದು.ಅದಕ್ಕಾಗಿ ಕೋಪ ಮಾಡಿಕೊಳ್ಳದೆ ಶಾಂತಿಯಿಂದ ಇರುವುದು ಒಳ್ಳೆಯದು. ಸಮಾಧಾನದಿಂದ ಇರಬೇಕು.

ಸಂಗಾತಿಯನ್ನು ಶತ್ರುವೆಂದು ಪರಿಗಣಿಸುವುದು

ನಿಮ್ಮ ಸಂಗಾತಿಯನ್ನು ಅವಮಾನಿಸಲು , ಅವರೊಂದಿಗೆ ಜಗಳವಾಡಲು ನೀವು ಅವಕಾಶವನ್ನು ಹುಡುಕಲು ಪ್ರಾರಂಭಿಸಿದಾಗ, ನೀವು ಖಂಡಿತವಾಗಿಯೂ ಅವರೊಂದಿಗೆ ಸಮಸ್ಯೆಯನ್ನು ಹೊಂದಿದ್ದೀರಿ ಎಂದರ್ಥ. ವೈವಾಹಿಕ ಜೀವನದಲ್ಲಿ ಸಂಗಾತಿಯೊಂದಿಗೆ ಜೊತೆ ಜೊತೆಯಾಗಿ ನಡೆಯಬೇಕು ಮತ್ತು ಅಂತಹ ಪರಿಸ್ಥಿತಿಯಲ್ಲಿ ಅವರ ವಿರುದ್ಧ ಯೋಚಿಸುವುದು ಸರಿಯಲ್ಲ.

ಒಬ್ಬರನ್ನೊಬ್ಬರು ನಿರಾಸೆಗೊಳಿಸುವುದು ಮತ್ತು ನಿಮ್ಮ ಸಂಗಾತಿಯ ಯಶಸ್ಸಿನಿಂದ ಅಸಮಾಧಾನಗೊಳ್ಳುವುದು ಅಥವಾ ಅಸೂಯೆಪಟ್ಟುಕೊಳ್ಳುವುದು ನಿಮ್ಮ ಸಂಬಂಧದ ಅಡಿಪಾಯವನ್ನು ಹಾಳುಮಾಡುತ್ತದೆ. ನಿಮ್ಮಿಬ್ಬರ ನಡುವೆ ಏನಾದರೂ ಸಮಸ್ಯೆಯಿದ್ದರೆ ಆರಾಮವಾಗಿ ಮಾತಾಡಿ ಬಗೆಹರಿಸಿಕೊಳ್ಳಿ. ಪ್ರತಿ ಬಾರಿಯೂ ಅವರ ವಿರುದ್ಧ ಹೋಗಬೇಕೆಂಬ ಅವಶ್ಯಕತೆಇಲ್ಲ.

ಇತರರ ಸಲಹೆ ಕೇಳುವುದು

ವೈವಾಹಿಕ ಜೀವನದಲ್ಲಿ ಸಮಸ್ಯೆ ಉಂಟಾದಾಗ, ಎಲ್ಲರೂ ಅಸಮಾಧಾನಗೊಳ್ಳುತ್ತಾರೆ ನಿಜ, ಆದರೆ ನೀವು ಅದನ್ನು ಹೊರಗಿನವರೊಂದಿಗೆ ಅಥವಾ ಮೂರನೇ ವ್ಯಕ್ತಿ ಜೊತೆ ಚರ್ಚಿಸುವುದು ಸರಿಯಲ್ಲ. ಗಂಡ ಹೆಂಡತಿ ಜಗಳದಲ್ಲಿ ಬೇರೆ ಯಾರು ಮಧ್ಯೆ ಪ್ರವೇಶಿಸುವುದು ಸರಿಯಲ್ಲ. ಹಾಗೆ ಮಾಡುವುದರಿಂದ ನಿಮಗೆ ಮತ್ತಷ್ಟು ಹಾನಿಯಾಗಬಹುದು.

ನಿಮ್ಮ ಸಮಸ್ಯೆಯನ್ನು ಯಾವುದೇ ಮೂರನೇ ವ್ಯಕ್ತಿಯ ಬಳಿಗೆ ಕೊಂಡೊಯ್ಯಬೇಡಿ. ಇದರಿಂದ ನಿಮ್ಮ ಸಂಬಂಧ ಮತ್ತಷ್ಟು ಹಾಳಾಗಬಹುದು. ಅದರ ಬದಲು ಒಟ್ಟಿಗೆ ಕುಳಿತು ಪರಿಹಾರವನ್ನು ಕಂಡುಕೊಳ್ಳುವುದು ಉತ್ತಮ. ಪತಿ ಪತ್ನಿಯ ನಡುವೆ ಯಾವತ್ತೂ ಮೂರನೇ ವ್ಯಕ್ತಿ ಮಧ್ಯ ಪ್ರವೇಶಿಸಲು ಬಿಡದಿರಿ.

ಹಣಕಾಸಿನ ಸಂಗತಿ

ಪ್ರತಿಯೊಬ್ಬರಿಗೂ ಅವರದ್ದೇ ಆದ ಜೀವನದ ಕನಸುಗಳು ಇರುತ್ತವೆ. ಅವುಗಳನ್ನು ಸಾಕಾರ ಮಾಡಲು ಹಣವನ್ನು ಕೂಡಿಡುತ್ತಾರೆ. ನೀವು ಮದುವೆಯಾದ ನಂತರ ನಿಮ್ಮ ಹೂಡಿಕೆಯ ಬಗ್ಗೆ ನಿಮ್ಮ ಸಂಗಾತಿಗೆ ತಿಳಿಸುವುದು ಉತ್ತಮ. ಒಂದು ವೇಳೆ ನೀವು ಮುಚ್ಚಿಟ್ಟರೆ ನಿಮ್ಮಿಬ್ಬರ ನಡುವೆ ತಪ್ಪು ತಿಳುವಳಿಕೆ ಮತ್ತು ಜಗಳಗಳು ಹೆಚ್ಚಾಗಬಹುದು.

ನಿಮ್ಮ ಸಂಗಾತಿ ಹಣವನ್ನು ಖರ್ಚು ಮಾಡುವ ವಿಧಾನದ ಬಗ್ಗೆ ನಿಮಗೆ ಯಾವುದೇ ಆಕ್ಷೇಪಣೆಗಳಿದ್ದರೆ, ಅವರೊಂದಿಗೆ ಮಾತನಾಡಿ ಬಗೆಹರಿಸಿ. ಮದುವೆಯಾದ ನಂತರ ನೀವು ಮಾಡುವ ಉಳಿತಾಯವು ನಿಮ್ಮಿಬ್ಬರಿಗೆ ಎನ್ನುವುದು ನೆನಪಿರಲಿ. ಹಾಗಾಗಿ ಇಬ್ಬರ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಉಳಿತಾಯವನ್ನು ಮಾಡಿ.

ಹಿಂದಿನ ಲೇಖನಡಿಜಿಟಲ್‌ ಸುದ್ದಿ ತಾಣ ನಿಯಂತ್ರಣಕ್ಕೆ ಮುಂದಾದ ಕೇಂದ್ರ; ಮಾಧ್ಯಮ ಮತ್ತು ನಿಯತಕಾಲಿಕೆಗಳ ನೋಂದಣಿ ಮಸೂದೆಗೆ ತಿದ್ದುಪಡಿ
ಮುಂದಿನ ಲೇಖನಪಂಜಾಬ್ ವಿಧಾನಸಭೆಯ ಮಾಜಿ ಸ್ಪೀಕರ್ ನಿರ್ಮಲ್ ಸಿಂಗ್ ಕಹ್ಲೋನ್ ನಿಧನ