ಅಪ್ರಾಪ್ತ ಮಕ್ಕಳ ಹೆಸರಿಗೆ ವಿಲ್ ಮಾಡಲಾದ ಆಸ್ತಿ ಮಾರಾಟದ ಸಂದರ್ಭದಲ್ಲಿ ಮಕ್ಕಳ ಹಿತಾಸಕ್ತಿಯನ್ನು ಪರಿಗಣಿಸಬೇಕು ಎಂದು ಕರ್ನಾಟಕದ ಹೈಕೋರ್ಟ್ ತೀರ್ಪು ನೀಡಿದೆ.
ಮಕ್ಕಳ ಹೆಸರಿಗೆ ಬಂದಿರುವ ಆಸ್ತಿಯನ್ನು ಪೋಷಕರು ಮಾರಾಟ ಮಾಡಲು ಕೋರಿ ಸಲ್ಲಿಸಿರುವ ಅರ್ಜಿಯನ್ನು ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ತಿರಸ್ಕರಿಸಿತು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಮೇಲ್ಮನವಿಯ ವಿಚಾರಣೆ ನಡೆಸಿದ ನ್ಯಾ. ಅಲೋಕ್ ಅರಾದೆ ಹಾಗೂ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯ ಪೀಠ ಈ ಅರ್ಜಿಯನ್ನು ತಿರಸ್ಕರಿಸಿತು.
ಪ್ರಕರಣ ವಿವರ : ಲಿಂಗರಾಜಪುರದ ಮುನಿಸ್ವಾಮಪ್ಪ ರಸ್ತೆಯ 30×20 ಚದರ ಅಡಿ ವಿಸ್ತೀರ್ಣದ ಮನೆ ಹಾಗೂ ಸತ್ಯಮೂರ್ತಿ ರಸ್ತೆಯ 72×42 ಚದರ ಅಡಿ ವಿಸ್ತೀರ್ಣದ ಮನೆಯ ಲಕ್ಷಯ್ಯ ಎಂಬವರ ಮಾಲೀಕತ್ವದಲ್ಲಿ ಇತ್ತು. ಅವರು 1994ರ ಸೆಪ್ಟೆಂಬರ್ 22ರಂದು ವಿಲ್ ಬರೆಸಿದರು.
ತಮ್ಮ ಸ್ಥಿರಾಸ್ತಿಗಳನ್ನು ತಮ್ಮ ಸಹೋದರನ ಮಗ ಮುನಿರಾಜು ಮಕ್ಕಳಾದ ಮಂಜು, ಶ್ರೀನಿವಾಸ್ ಹಾಗು ದೇವಿ ಹೆಸರಿಗೆ ಲಕ್ಷಯ್ಯ ವಿಲ್ ಮಾಡಿದ್ದರು. ಪ್ರೌಢಾವಸ್ಥೆಗೆ ತಲುಪಿದ ನಂತರ ಆಸ್ತಿಯ ಖಾತೆಯನ್ನು ಅವರ ಹೆಸರಿಗೆ ಬದಲಿಸಿ ಕೊಡಬೇಕು ಎಂದು ಶರತ್ತು ವಿಧಿಸಿದ್ದರು.
ಜೊತೆಗೆ ಆ ಆಸ್ತಿಗಳ ಮೇಲೆ ಮಂಜು, ಶ್ರೀನಿವಾಸ್ ಹಾಗೂ ದೇವಿಯವರಿಗೆ ಹುಟ್ಟಲಿರುವ ಮಕ್ಕಳಿಗೂ ಉತ್ತರಾಧಿಕಾರದ ಹಕ್ಕು, ನೀಡುವುದಾಗಿ ಹೇಳಿದ್ದರು. ಇದೇ ವೇಳೆ ತನ್ನ ಸಹೋದರ ಮುನಿರಾಜು ಅವರಿಗಾಗಲೇ ಅವರ ಮೂವರು ಮಕ್ಕಳಿಗಾಗಲೇ ಆಸ್ತಿ ಮಾರಾಟ ಹಕ್ಕು ಇರುವುದಿಲ್ಲ ಎಂದು ಷರತ್ತು ವಿಧಿಸಿದ್ದರು.
ಮುನಿರಾಜ ಮಗಳು ಮಂಜುನಾಥ ತಮ್ಮ ಪುತ್ರನೊಂದಿಗೆ ಮುನಿಸ್ವಾಮಪ್ಪ ರಸ್ತೆಯಲ್ಲಿ ಇರುವ ಮನೆಯಲ್ಲಿ ವಾಸಿಸುತ್ತಿದ್ದರೆ, ಮಕ್ಕಳದ ಶ್ರೀನಿವಾಸ್ ಮತ್ತು ದೇವಿ ತಮ್ಮ ಮಕ್ಕಳೊಂದಿಗೆ ಸತ್ಯಮೂರ್ತಿ ರಸ್ತೆಯಲ್ಲಿ ಇರುವ ಮನೆಯಲ್ಲಿ ವಾಸವಾಗಿದ್ದರು.
ಆಸ್ತಿಯ ಮೇಲೆ ಸಂಪೂರ್ಣ ಹಕ್ಕು ಇಲ್ಲ: ಲಕ್ಷಯ್ಯ ಮಾಡಿರುವ ವೀಲ್ ಗಮನಿಸಿದರೆ ಆಸ್ತಿಗಳು ಮೊದಲಿಗೆ ಮುನಿರಾಜು ಅವರ ಮೂವರು ಮಕ್ಕಳಿಗೆ, ಆ ಬಳಿಕ ಅವರ ಮಕ್ಕಳಿಗೆ ಸೇರಲಿದೆ ಅಂದರೆ ಮಂಜು, ಶ್ರೀನಿವಾಸ್ ಮತ್ತು ದೇವಿ ಅವರಿಗೆ ಜನಿಸಲಿರುವ ಮಕ್ಕಳ ಪರವಾಗಿ ಮೊದಲೇ ವಿಲ್ ಮಾಡಲಾಗಿದೆ. ಹಾಗಾಗಿ, ಮುನಿರಾಜು ಅವರ ಮೂವರು ಮೊಮಕ್ಕಳು ಆಸ್ತಿ ಸಂಪೂರ್ಣ ಮಾಲೀಕರೇನಿಸಿಕೊಳ್ಳುವುದಿಲ್ಲ ಎಂದು ನ್ಯಾಯ ಪೀಠ ಅಭಿಪ್ರಾಯಪಟ್ಟಿದೆ.
ಮಕ್ಕಳ ಹಿತ ಪರಿಗಣಿಸಿ ಎಂದು ಹೈಕೋರ್ಟ್ : ಅಪ್ರಾಪ್ತ ಮಕ್ಕಳ ಪಾಲಕರು ತಮ್ಮ ಆದಾಯದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಓರ್ವ ಬಾಲಕ ಎಂಟನೇ ತರಗತಿ ಓದುತ್ತಿದ್ದರೆ, ಮತ್ತೊಬ್ಬಾಕೆ ನರ್ಸರಿಯಲ್ಲಿ ಇದ್ದಾಳೆ. ಅವಳ ಶಾಲೆಯ ಖರ್ಚು ಎಷ್ಟು? ವಿದ್ಯಾಭ್ಯಾಸಕ್ಕಾಗಿ ಎಷ್ಟು ಹಣದ ಅಗತ್ಯವಿದೆ? ಮಾರಾಟ ಮಾಡುವ ಆಸ್ತಿಯ ಮೌಲ್ಯ ಎಷ್ಟು? ಎಷ್ಟು ಮೊತ್ತಕ್ಕೆ ಮಾರಾಟ ಮಾಡಲು ಉದ್ದೇಶಿಸಲಾಗಿದೆ ಎಂಬ ಬಗ್ಗೆ ಅರ್ಜಿದಾರರು ಯಾವುದೇ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿಲ್ಲ.
ಮಕ್ಕಳ ವಿದ್ಯಾಭ್ಯಾಸ ಪಾಲಕರ, ಹೆತ್ತವರ ಹೊಣೆ. ಅವರು ಯಾವ ಕಾರಣಕ್ಕೆ ಮಕ್ಕಳಿಗೆ ಶಿಕ್ಷಣ ಕೊಡಿಸಲು ಸಾಧ್ಯವಾಗುತ್ತಿಲ್ಲ ಎಂದು ತೋರಿಸುವ ಯಾವುದೇ ದಾಖಲೆಗಳನ್ನು ಹಾಜರುಪಡಿಸಿಲ್ಲ.
ಎಲ್ಲಕ್ಕಿಂತ ಹೆಚ್ಚಾಗಿ,ಮಕ್ಕಳ ಶಿಕ್ಷಣಕ್ಕಾಗಿ ಎರಡು ಸ್ಥಿರಾಸ್ತಿಗಳನ್ನು ಮಾರಾಟ ಮಾಡಬೇಕು ಎಂದು ಸಮರ್ಥಿಸುವ ಯಾವುದೇ ಅಂಶಗಳು ಲಭ್ಯವಿಲ್ಲ ಎಂದು ಹೇಳಿರುವ ಹೈಕೋರ್ಟ್ ನ್ಯಾಯಪೀಠ, ಅರ್ಜಿದಾರರು ಸಲ್ಲಿಸಿರುವ ಮೇಲ್ಮನವಿಯನ್ನು ವಜಾ ಗೊಳಿಸಿ ಆದೇಶ ನೀಡಿತು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರೈಸಿದ್ದು ವರ್ಷ ಸಾಧಿಸಿದ್ದು ಶೂನ್ಯ – ಬಿವೈವಿ
ಮೋದಿ ನೇತೃತ್ವದ BJP 430 ಸೀಟ್ ಗೆಲ್ಲುತ್ತೆ ಎಂದ ಚೀನಾ….
ನಮ್ಮ ಹೆಮ್ಮೆಯ ಮೈಸೂರು
ಒಂದು ಅದ್ಭುತ. ಫುಟ್ಬಾಲ್ನ ಸಂಯೋಜನೆ..
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.