ಮನೆ ರಾಜ್ಯ ಶಿವಮೊಗ್ಗ: ಆಯನೂರಲ್ಲಿ ಬಿಜೆಪಿ ಪ್ರಗತಿರಥಕ್ಕೆ ಚಾಲನೆ

ಶಿವಮೊಗ್ಗ: ಆಯನೂರಲ್ಲಿ ಬಿಜೆಪಿ ಪ್ರಗತಿರಥಕ್ಕೆ ಚಾಲನೆ

0

ಶಿವಮೊಗ್ಗ : ಶಿವಮೊಗ್ಗ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಆಯನೂರಲ್ಲಿ ಶುಕ್ರವಾರ ಬಿಜೆಪಿಯ ಪ್ರಗತಿರಥಕ್ಕೆ ಗ್ರಾಮಾಂತರ ಶಾಸಕರಾದ ಕೆ.ಬಿ.ಅಶೋಕ್‌ ನಾಯ್ಕ್ ಹಾಗೂ ಬಿಜೆಪಿ ಮುಖಂಡರು ಹಾಗೂ ಸರ್ಜಿ ಫೌಂಡೇಶನ್ನಿನ ಮ್ಯಾನೇಜಿಂಗ್‌ ಟ್ರಸ್ಟಿ ಡಾ.ಧನಂಜಯ ಸರ್ಜಿ ಅವರು ಚಾಲನೆ ನೀಡಿದರು.

ಈ ಸಂದರ್ಭ ಶಾಸಕರಾದ ಅಶೋಕ್‌ ನಾಯ್ಕ್‌‍ ಅವರು ಮಾತನಾಡಿ, ದೇಶಕ್ಕೆ ಬಿಜೆಪಿಯೇ ಭರವಸೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಅನೇಕ ಜನಪರ ಕೆಲಸಗಳನ್ನು ಅನುಷ್ಠಾನ ಮಾಡಿದೆ. ಪ್ರಧಾನಿ ನರೇಂದ್ರ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಕಾರ್ಯಕ್ರಮಕ್ಕೆ ಬಂದಾಗ ಲಕ್ಷಾಂತರ ಜನ ಸೇರಿದ್ದರು. ದೇಶದ ಹೊರಗೆ ಹಾಗೂ ಒಳಗಿನ ಭದ್ರತೆಗೆ ಪ್ರಧಾನಿ ಅವಶ್ಯ. ಇಂತಹ ಪ್ರಧಾನಿಗೆ ವಿಶ್ವದೆಲ್ಲೆಡೆ ಪ್ರಶಂಸೆಯಿದೆ. ರಾಜ್ಯ ಬಿಜೆಪಿ ಅಭಿವೃದ್ಧಿಗೆ ವಿಮಾನ ನಿಲ್ದಾಣ ಉದ್ಘಾಟನಾ ಸಮಯದಲ್ಲಾದ ಸಾವಿರಾರು ಕೋಟ್ಯಾಂತರ ರೂಪಾಯಿ ಅನುದಾನ ಕಾಮಗಾರಿಗಳ ಉದ್ಘಾಟನೆಯೇ ಸಾಕ್ಷಿ. ಬಿಜೆಪಿ ಸರಕಾರದ ಸಾಧನೆಗಳನ್ನು ತಿಳಿಸಲು ಈ ರಥ ಪ್ರತೀ ಹಳ್ಳಿಗಳಲ್ಲಿ ಸಂಚರಿಸಲಿದೆ. ಜನರಿಂದ ಸಲಹೆ ಪಡೆಯುವ ಸಂಕಲ್ಪ ಮಾಡಿದೆ ಎಂದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಹರಿಕೃಷ್ಣ, ಗ್ರಾಮಾಂತರ ಮಂಡಲ ರತ್ನಾಕರ ಶೆಣೈ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಪೇಂದ್ರ, ಜಿಲ್ಲಾ ಉಪಾಧ್ಯಕ್ಷೆ ಪದ್ಮಿನಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ತಮ್ಮಡಿಹಳ್ಳಿ ನಾಗರಾಜ್‌, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ಗೋಪಾಲ್‌, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಪವನ್‌, ತಾಲೂಕು ಪ್ರಧಾನ ಕಾರ್ಯದರ್ಶಿ ಅನಿಲ್‌ ಹಾಗೂ ಮುಖಂಡರಾದ ಲಕ್ಷ್ಮಿಕಾಂತ್‌ ಶೆಟ್ರು, ಮಹಾ ಶಕ್ತಿ ಕೇಂದ್ರದ ಅಧ್ಯಕ್ಷರಾದ ಅರುಣ್‌, ಪ್ರಧಾನ ಕಾರ್ಯದರ್ಶಿ ಅಣ್ಣಪ್ಪ, ಸಿಂಗನಹಳ್ಳಿ ಸುರೇಶ್‌ ಹಾಜರಿದ್ದರು.

ಹಿಂದಿನ ಲೇಖನಟೊಮೇಟೊ ಮತ್ತು ಸೌತೆಕಾಯಿ ಒಟ್ಟಿಗೆ ತಿನ್ನಬಾರದಂತೆ!
ಮುಂದಿನ ಲೇಖನಮಂಸೋರೆ ನಿರ್ದೇಶನದ ‘19.20.21’ ಸಿನಿಮಾ ವಿಮರ್ಶೆ