ಮನೆ ಮನರಂಜನೆ ‘ಸಿಖಂದರ್’: ಸಲ್ಮಾನ್ ಖಾನ್ ಹೊಸ ಸಿನಿಮಾದ ಶೀರ್ಷಿಕೆ- 2025ರ ಈದ್ ​ಗೆ ರಿಲೀಸ್

‘ಸಿಖಂದರ್’: ಸಲ್ಮಾನ್ ಖಾನ್ ಹೊಸ ಸಿನಿಮಾದ ಶೀರ್ಷಿಕೆ- 2025ರ ಈದ್ ​ಗೆ ರಿಲೀಸ್

0

ಸಲ್ಮಾನ್ ಖಾನ್ ಅವರಿಗೆ ದೊಡ್ಡ ಗೆಲುವು ಸಿಕ್ಕಿ ಹಲವು ವರ್ಷಗಳೇ ಕಳೆದಿವೆ. ಈ ಕಾರಣಕ್ಕೆ ಅವರು ದಕ್ಷಿಣ ಭಾರತದ ನಿರ್ದೇಶಕನ ಜೊತೆ ಕೈ ಜೋಡಿಸಿದ್ದಾರೆ. ಖ್ಯಾತ ಡೈರೆಕ್ಟರ್ ಎಆರ್​ ಮುರುಗದಾಸ್ ಜೊತೆ ಅವರು ಸಿನಿಮಾ ಮಾಡಲಿರುವುದು ಗೊತ್ತೇ ಇದೆ. ಈಗ ಸಿನಿಮಾದ ಟೈಟಲ್ ರಿವೀಲ್ ಆಗಿದೆ. ಈ ಚಿತ್ರಕ್ಕೆ ‘ಸಿಖಂದರ್’ ಎಂದು ಶೀರ್ಷಿಕೆ ಇಡಲಾಗಿದೆ. ಸಿಖಂದರ್ ಎಂದರೆ ಯೋಧ ಎಂದರ್ಥ.

Join Our Whatsapp Group

ಸಲ್ಮಾನ್ ಖಾನ್ ಅವರ ಹೊಸ ಸಿನಿಮಾದ ಟೈಟಲ್ ಇದೇ ದಿನ ಘೋಷಣೆ ಆಗಿದೆ. ಸಿನಿಮಾ ಟೈಟಲ್ ಜೊತೆ 2025ರ ಈದ್​ಗೆ ಚಿತ್ರ ರಿಲೀಸ್ ಆಗಲಿದೆ ಎಂದು ತಂಡ ಮಾಹಿತಿ ನೀಡಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಸಖತ್ ಖುಷಿಪಟ್ಟಿದ್ದಾರೆ. ತಮಿಳು, ತೆಲುಗಿನಲ್ಲಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಎಆರ್ ಮುರುಗದಾಸ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿರುವುದರಿಂದ ಕುತೂಹಲ ಡಬಲ್ ಆಗಿದೆ.

ಖಾನ್ ಅವರು ಮುರುಗದಾಸ್ ನಿರ್ದೇಶನದಲ್ಲಿ ಸಿನಿಮಾ ಮಾಡುತ್ತಿದ್ದಾರೆ. ಈ ಚಿತ್ರವನ್ನು ಸಲ್ಲು ಗೆಳೆಯ ಸಾಜಿದ್ ನಾಡಿಯಾವಾಲ ನಿರ್ಮಾಣ ಮಾಡುತ್ತಿದ್ದು, ದೊಡ್ಡ ಬಜೆಟ್​ ನಲ್ಲಿ ಸಿದ್ಧವಾಗುತ್ತಿದೆ.

ಮುರುಗದಾಸ್ ಅವರು ಈ ಮೊದಲು ‘ಗಜಿನಿ’, ‘ಸ್ಟಾಲಿನ್’, ‘ಸೆವೆಂತ್ ಸೆನ್ಸ್’, ‘ತುಪ್ಪಾಕಿ’, ‘ಸ್ಪೈಡರ್’ ಸೇರಿ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ಕೊಟ್ಟಿದ್ದಾರೆ. ಮುರುಗದಾಸ್ ಅವರಿಗೆ ಹಿಂದಿ ಚಿತ್ರರಂಗ ಹೊಸದಲ್ಲ. ಈ ಮೊದಲು ಆಮಿರ್ ಖಾನ್ ನಟಿಸಿದ್ದ ‘ಗಜಿನಿ’ ಚಿತ್ರವನ್ನು ಅವರೇ ನಿರ್ದೇಶನ ಮಾಡಿದ್ದರು. ಇದು ತಮಿಳಿನಲ್ಲಿ ಅವರೇ ನಿರ್ದೇಶನ ಮಾಡಿದ್ದ ‘ಗಜಿನಿ’ ಚಿತ್ರದ ಹಿಂದಿ ರಿಮೇಕ್ ಆಗಿತ್ತು. ಸೊನಾಕ್ಷಿ ಸಿನ್ಹಾ ನಟನೆಯ ‘ಅಕಿರಾ’ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಮುರುಗದಾಸ್ ನಿರ್ದೇಶನದಲ್ಲಿ ಮೂಡಿ ಬಂದಿದ್ದ ‘ಸ್ಟಾಲಿನ್’ ಚಿತ್ರವನ್ನು ಹಿಂದಿಯಲ್ಲಿ ‘ಜೈ ಹೋ’ ಹೆಸರಲ್ಲಿ ರೀಮೇಕ್ ಮಾಡಲಾಗಿತ್ತು. ಇದರಲ್ಲಿ ಸಲ್ಲು ನಟಿಸಿದ್ದರು. ಆದರೆ, ಸಿನಿಮಾ ಹಿಟ್ ಆಗಲಿಲ್ಲ.

‘ಸಿಖಂದರ್’ ಸಿನಿಮಾ ಪಕ್ಕಾ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿರಲಿದೆ. ಪೋರ್ಚುಗಲ್ ಸೇರಿ ಅನೇಕ ದೇಶಗಳಲ್ಲಿ ಸಿನಿಮಾದ ಶೂಟಿಂಗ್ ನಡೆಯಲಿದೆ. 400 ಕೋಟಿ ರೂಪಾಯಿ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗುತ್ತಿದೆ. ಚಿತ್ರದಲ್ಲಿ ಬೇರೆ ಭಾಷೆಗಳ ಕೆಲವು ಸ್ಟಾರ್ ನಟರು ಸಹ ನಟಿಸಲಿದ್ದಾರೆ. ಇದು ಪ್ಯಾನ್ ಇಂಡಿಯಾ ಸಿನಿಮಾ ಆಗಿರಲಿದೆ. ‘ಟೈಗರ್ 3’ ಸಾಧಾರಣ ಹಿಟ್ ಆದ ಬಳಿಕ ಸಲ್ಮಾನ್ ಖಾನ್ ಸಿನಿಮಾ ಆಯ್ಕೆಯಲ್ಲಿ ಹೆಚ್ಚು ಎಚ್ಚರಿಕೆ ವಹಿಸುತ್ತಿದ್ದಾರೆ ಎಂದು ವರದಿ ಆಗಿತ್ತು. ಎಆರ್​ ಮುರುಗದಾಸ್ ಅವರನ್ನು ಆಯ್ಕೆ ಮಾಡಿಕೊಂಡ ಬಳಿಕ ಈ ವಿಚಾರ ಫ್ಯಾನ್ಸ್​ ಗೆ ಖಚಿತವಾಗಿದೆ.

ಹಿಂದಿನ ಲೇಖನಸದನದಲ್ಲಿ ಮ್ಯೂಟ್‌ ಆಗುವ ಬಿಜೆಪಿ ಸಂಸದರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ: ಎಚ್ ಎ ವೆಂಕಟೇಶ್
ಮುಂದಿನ ಲೇಖನನಮ್ಮ ಸಿ.ಟಿ.ರವಿ ಅವರಿಗೆ ಅನ್ಯಾಯ ಆಗಿದೆ. ಸರಿಪಡಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದು: ಬಿ.ಎಸ್.ಯಡಿಯೂರಪ್ಪ