ಮನೆ ಆರೋಗ್ಯ ವ್ಯಕ್ತಿಗೆ ಹೃದಯಾಘಾತ ಕಂಡು ಬರಲು ಮುಖ್ಯ ಕಾರಣ

ವ್ಯಕ್ತಿಗೆ ಹೃದಯಾಘಾತ ಕಂಡು ಬರಲು ಮುಖ್ಯ ಕಾರಣ

0

ಇಂದು ಹೃದಯದ ಸಮಸ್ಯೆ ವ್ಯಾಪಕವಾಗಿ ವಿಶ್ವದಾದ್ಯಂತ ಕಂಡು ಬರುತ್ತಿರುವುದಕ್ಕೆ ನಾವುಗಳೇ ಕಾರಣವಾಗಿದ್ದೇವೆ.

ನಾವು ತಿನ್ನುವ ಆಹಾರ, ಬದುಕುತ್ತಿರುವ ವಾತಾವರಣ, ಅಳವಡಿಸಿಕೊಂಡಿರುವ ಜೀವನ ಶೈಲಿ ಹೀಗೆ ಅನೇಕ ಮಾರ್ಗಗಳಲ್ಲಿ ಉತ್ತರಗಳನ್ನು ಹುಡುಕ ಬಹುದು. ಇತ್ತೀಚಿನ ದಿನಗಳಲ್ಲಂತೂ ತುಂಬಾ ಚಿಕ್ಕ ವಯಸ್ಸಿಗೆ ಹೃದಯಾಘಾತ ಆಗಿ ಪ್ರಾಣ ಬಿಡುತ್ತಿರುವ ಜನರನ್ನು ನೋಡುತ್ತಿದ್ದೇವೆ.

ಹೃದಯಾಘಾತ ಬರಲು ಇವೇ ಕಾರಣಗಳು

• ಜನರಿಗೆ ತಮ್ಮ ಮುಂದಿನ ಭವಿಷ್ಯದ ಬಗ್ಗೆ ಚಿಂತೆಯೇ ಇಲ್ಲದಾಗಿದೆ. ಕೇವಲ ಹಣದ ಹಿಂದೆ ದುಂಬಾಲು ಬೀಳುವಂತೆ ಜೀವನ ನಡೆಸುತ್ತಿದ್ದಾರೆ.

• ಇದರಿಂದ ಅತಿಯಾದ ಮಾನಸಿಕ ಒತ್ತಡ ಎದುರಾಗುತ್ತಿದೆ. ಹೃದಯಕ್ಕೆ ಸಂಬಂಧಪಟ್ಟಂತೆ ಕಾಯಿಲೆಗಳು ಬರಲು ಇದು ಕೂಡ ಒಂದು ಕಾರಣ. ಇಂತಹ ಬೇರೆ ಬೇರೆ ಕಾರಣಗಳನ್ನು ಇಲ್ಲಿ ಆರೋಗ್ಯ ತಜ್ಞರಾದ ಲವ್ನೀತ್ ಬಾತ್ರಾ ತಿಳಿಸಿಕೊಟ್ಟಿದ್ದಾರೆ.

ಧೂಮಪಾನ ಮಾಡುವುದು

• ಧೂಮಪಾನ ಮಾಡುವ ಅಭ್ಯಾಸ ಇದ್ದವರಿಗೆ ಹೃದಯದ ತೊಂದರೆ ಕಟ್ಟಿಟ್ಟ ಬುತ್ತಿ. ಏಕೆಂದರೆ ಸಿಗರೇಟ್ ತನ್ನಲ್ಲಿ ರಾಸಾಯನಿಕ ಅಂಶಗಳನ್ನು ಒಳಗೊಂಡಿರುತ್ತದೆ.

• ಇದು ರಕ್ತನಾಳಗಳನ್ನು ಬ್ಲಾಕ್ ಮಾಡುತ್ತದೆ. ಇದರಿಂದ ಸರಿಯಾಗಿ ರಕ್ತ ಸಂಚಾರ ಆಗುವುದಿಲ್ಲ. ಯಾವುದೇ ಸಂದರ್ಭ ದಲ್ಲಿ ಹೃದಯದ ಮೇಲೆ ಅತಿ ಹೆಚ್ಚಿನ ಒತ್ತಡ ಉಂಟಾಗಿ ಹೃದಯಾಘಾತ ಆಗಬಹುದು ಮತ್ತು ಇದ್ದಕ್ಕಿ ದ್ದಂತೆ ಸಾವು ಸಂಭವಿಸಬಹುದು.

•  ಇದನ್ನು ಹೈಬಿಪಿ ಎಂದು ಕರೆಯಬಹುದು. ರಕ್ತ ನಾಳಗಳನ್ನು ಇದು ಗಟ್ಟಿಯಾಗುವಂತೆ ಮಾಡುತ್ತದೆ.

• ಇದರಿಂದ ರಕ್ತ ನಾಳಗಳಲ್ಲಿ ರಕ್ತ ಸಂಚಾರ ಅಷ್ಟಾಗಿ ನಡೆಯುವು ದಿಲ್ಲ ಮತ್ತು ಹೃದಯಕ್ಕೆ ಆಮ್ಲಜನಕದ ಪೂರೈಕೆ ಆಗುವುದಿಲ್ಲ. ಇದರಿಂದ ಹೃದಯದ ಸಮಸ್ಯೆ ತಪ್ಪಿದ್ದಲ್ಲ ಎಂದು ಆರೋಗ್ಯ ತಜ್ಞರಾದ ಲವ್ನೀತ್ ಬತ್ರ ಹೇಳಿದ್ದಾರೆ.

ಅತಿ ಹೆಚ್ಚಿನ ಕೊಲೆಸ್ಟ್ರಾಲ್

• ಯಾರಿಗೆ ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗಿ ಸೇರಿರುತ್ತದೆ ಅಂತಹವರಿಗೆ ಹೃದಯ ರಕ್ತನಾಳ ಕಾಯಿಲೆಗಳು ಖಂಡಿತ ಬರುತ್ತವೆ.

• ಏಕೆಂದರೆ ಕೊಲೆಸ್ಟ್ರಾಲ್ ರಕ್ತನಾಳಗಳ ಒಳಭಾಗದಲ್ಲಿ ಹೆಚ್ಚಾಗಿ ಶೇಖರಣೆಯಾಗಿ ಪ್ರಮುಖವಾಗಿ ಅಂಗಾಂಗಗಳಿಗೆ ರಕ್ತ ಸಂಚಾರ ನ್ನು ಆಗಲು ಬಿಡುವುದಿಲ್ಲ. ಇದರಿಂದ ಕೂಡ ಹೃದಯಕ್ಕೆ ತೊಂದರೆ ಉಂಟಾಗುತ್ತದೆ ಮತ್ತು ಯಾವುದೇ ಸಂದರ್ಭದಲ್ಲಿ ಹೃದಯಾಘಾತ ಆಗ ಬಹುದು.

ಸಕ್ಕರೆ ಕಾಯಿಲೆ ಇದ್ದರೆ

• ರಕ್ತದಲ್ಲಿ ಯಾರಿಗೆ ಹೆಚ್ಚಾಗಿ ಸಕ್ಕರೆ ಪ್ರಮಾಣ ಇರುತ್ತದೆ ಅಂದರೆ ಬ್ಲಡ್ ಶುಗರ್ ಲೆವೆಲ್ ಹೆಚ್ಚಾಗಿರುತ್ತದೆ ಅವರಿಗೆ ಮಧುಮೇಹ ಇರುವ ಕಾರಣದಿಂದ ರಕ್ತನಾಳಗಳು ಮತ್ತು ನರನಾಡಿಗಳು ಹೃದಯದ ಮಾತು ಕೇಳುವುದಿಲ್ಲ.

• ಹೀಗಾಗಿ ಆಮ್ಲಜನಕ ತುಂಬಿರುವ ರಕ್ತ ಮತ್ತು ಪೌಷ್ಟಿ ಕಾಂಶ ಒಳಗೊಂಡ ರಕ್ತ ಸಂಚಾರ ಇರುವುದಿಲ್ಲ. ಇದರಿಂದ ಹೃದಯಕ್ಕೆ ಸಂಬಂಧಪಟ್ಟ ಸಮಸ್ಯೆಗಳು ಉದ್ಭವವಾಗುತ್ತವೆ.

ಅತಿಯಾದ ದೇಹದ ತೂಕ ಅಥವಾ ಬೊಜ್ಜು

• ಇತ್ತೀಚಿನ ದಿನಮಾನಗಳಲ್ಲಿ ಜನರಿಗೆ ಇದೇ ಒಂದು ದೊಡ್ಡ ಸಮಸ್ಯೆಯಾಗಿದೆ. ಅತಿಯಾದ ದೇಹದ ತೂಕ ಹೊಂದಿರುವ ಜನರಲ್ಲಿ ಬೊಜ್ಜು ಹೆಚ್ಚಾಗಿರುತ್ತದೆ.

• ಅಂದರೆ ಕೆಟ್ಟ ಕೊಬ್ಬು ದೇಹದ ವಿವಿಧ ಭಾಗಗಳಲ್ಲಿ ಶೇಖರಣೆ ಯಾಗಿರುತ್ತದೆ. ಇದು ರಕ್ತನಾಳಗಳಲ್ಲಿ ಒತ್ತಡ ವನ್ನು ತರುತ್ತದೆ ಮತ್ತು ರಕ್ತ ಬ್ಲಾಕ್ ಆಗುವಂತೆ ಮಾಡು ತ್ತದೆ. ಇದರಿಂದ ರಕ್ತ ಸಂಚಾರ ಸರಿಯಾಗಿ ಇಲ್ಲದೆ ಹೃದಯಘಾತ ಆಗುವ ಸಾಧ್ಯತೆ ಇರುತ್ತದೆ.

ಜಡ ಜೀವನ ಶೈಲಿ ಒಂದು ಕಾರಣ

• ಈಗಿನ ಕಾಲದಲ್ಲಿ ಹಣ ಸಂಪಾದನೆ ಮಾಡಲು ವಿವಿಧ ಮಾರ್ಗಗಳು ಇರುವುದರಿಂದ ಮೈಬಗ್ಗಿಸಿ ಕಷ್ಟಪಟ್ಟು ಬೆವರು ಸುರಿಸಿ ಸಂಪಾದನೆ ಮಾಡುವ ಅವಶ್ಯಕತೆ ಇಲ್ಲ.

• ಹಾಗಾಗಿ ಜನರಿಗೆ ಜಡ ಜೀವನ ಶೈಲಿ ಅಭ್ಯಾಸವಾಗಿ ಹೋಗಿದೆ. ವ್ಯಾಯಾಮವನ್ನು ಸಹ ನಮ್ಮ ಜನರು ಮರೆತುಬಿಟ್ಟಿದ್ದಾರೆ. ಇದರಿಂದಲೂ ಸಹ ಇಂದು ಹೃದ ಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ.

ಹಿಂದಿನ ಲೇಖನಲೋಕಾಯುಕ್ತರ ಪುತ್ರನಿಂದ ದಾವೆ: ಖೋಡೆ ಕುಟುಂಬ ಸದಸ್ಯರು, ಮಾಧ್ಯಮದ ವಿರುದ್ಧ ನ್ಯಾಯಾಲಯದಿಂದ ತಾತ್ಕಾಲಿಕ ಪ್ರತಿಬಂಧಕಾದೇಶ
ಮುಂದಿನ ಲೇಖನತಂದೆ ನೈಸರ್ಗಿಕ ರಕ್ಷಕ, ಮಗುವಿನ ಕಸ್ಟಡಿಯನ್ನು ಕೋರಬಹುದು: ಕರ್ನಾಟಕ ಹೈಕೋರ್ಟ್