ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ರಾಜ್ಯದಲ್ಲಿ ಮಳೆ ಸ್ವಲ್ಪ ಬಿಡುವು ನೀಡಿದ್ದು, ಮೂರಾಲ್ಕು ಜಿಲ್ಲೆಗಳಲ್ಲಿ ಮಾತ್ರ ಎಂದಿನಂತೆ ಮಳೆ ಸುರಿಯುತ್ತಿದ್ದು, ಪ್ರವಾಹಭೀತಿಯೊಡ್ಡಿದೆ. ಬೆಳಗಾವಿ, ರಾಮನಗರ, ರಾಯಚೂರು, ಯಾದಗಿರಿ, ಬೀದರ್, ಕಲಬುರಗಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.

ಇನ್ನೂ ಬೆಂಗಳೂರು, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು,, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ವೇಳೆಗೆ ಅಲ್ಲಲ್ಲಿ ಚದುರಿದಂತೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ 28-13, ಮಂಗಳೂರಿನಲ್ಲಿ 29-23, ಶಿವಮೊಗ್ಗದಲ್ಲಿ 28-20, ಬೆಳಗಾವಿಯಲ್ಲಿ 25-20, ಮೈಸೂರಿನಲ್ಲಿ 30-19, ಮಂಡ್ಯದಲ್ಲಿ 31-19, ಕೊಡಗಿನಲ್ಲಿ 25-17, ರಾಮನಗರದಲ್ಲಿ 29-25, ಹಾಸನದಲ್ಲಿ 27-18, ಚಾಮರಾಜನಗರದಲ್ಲಿ 31-20, ಚಿಕ್ಕಬಳ್ಳಾಪುರದಲ್ಲಿ 28-19, ಕೋಲಾರದಲ್ಲಿ 30-20, ತುಮಕೂರಿನಲ್ಲಿ 29-19, ಉಡುಪಿಯಲ್ಲಿ 29-24, ಚಿಕ್ಕಮಗಳೂರಿನಲ್ಲಿ 26-17, ದಾವಣಗೆರೆಯಲ್ಲಿ 28-21, ಚಿತ್ರದುರ್ಗದಲ್ಲಿ 28-19, ಹಾವೇರಿಯಲ್ಲಿ 28-21, ಬಳ್ಳಾರಿಯಲ್ಲಿ 31-22, ಗದಗದಲ್ಲಿ 28-21, ಕೊಪ್ಪಳದಲ್ಲಿ 29-22, ರಾಯಚೂರಿನಲ್ಲಿ 31-23, ಯಾದಗಿರಿಯಲ್ಲಿ 29-22, ವಿಜಯಪುರದಲ್ಲಿ 28-21, ಬೀದರ್ ನಲ್ಲಿ 25-20, ಕಲಬುರಗಿಯಲ್ಲಿ 28-22, ಬಾಗಲಕೋಟೆಯಲ್ಲಿ 29-22 ಡಿಗ್ರಿ ಸೆಲ್ಸಿಯಸ್‌ ಇದೆ.

ಹಿಂದಿನ ಲೇಖನಸ್ವಾತಂತ್ರ್ಯೋತ್ಸವ: ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ಮುಂದಿನ ಲೇಖನಹೊಸ ಸಂಕಲ್ಪದೊಂದಿಗೆ, ಹೊಸ ದಿಕ್ಕಿನತ್ತ ಹೆಜ್ಜೆ ಹಾಕುವ ದಿನವಿದು: ಪ್ರಧಾನಿ ಮೋದಿ