ಮನೆ ರಾಜ್ಯ ಇಂದಿನ ಹವಾಮಾನ ವರದಿ

ಇಂದಿನ ಹವಾಮಾನ ವರದಿ

0

ಬೆಂಗಳೂರು (Bengaluru): ರಾಜ್ಯದಲ್ಲಿ ಮಳೆ ಕೊಂಚ ಬಿಡುವು ನೀಡಿದೆ. ಆದರೆ ಶಿವಮೊಗ್ಗ ಜಿಲ್ಲೆಯಲ್ಲಿ ನಾಳೆಯಿಂದ 6 ದಿನಗಳ ಕಾಲ ಮಳೆಯಾಗಲಿದ್ದು, ವಿಜಯಪುರದಲ್ಲಿ ಮೂರು ದಿನ ಮಳೆಯಾಗಲಿದೆ. ಹಾಗೆಯೇ ಬೆಳಗಾವಿ, ಕೊಡಗು, ರಾಮನಗರ, ಗದಗ, ವಿಜಯಪುರ, ಕೊಪ್ಪಳ, ಬಾಗಲಕೋಟೆ ಜಿಲ್ಲೆಗಳಲ್ಲೂ ಬಿಸಿಲು ಸಹಿತ ಜುತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಹೇಳಿದೆ.

ಬೆಂಗಳೂರು, ಕಲಬುರಗಿ, ಮಂಗಳೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಬೀದರ್, ಹಾಸನ, ರಾಯಚೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ ಸೇರಿದಂತೆ ದಕ್ಷಿಣ ಒಳನಾಡು ಭಾಗಗಳಲ್ಲಿ ಮುಂಜಾನೆ ಮೋಡ ಕವಿದ ವಾತಾವರಣ ಇರಲಿದ್ದು, ಮಧ್ಯಾಹ್ನದ ವೇಳೆಗೆ ಬಿಸಿಲಿನ ತಾಪಮಾನ ಏರಿಕೆಯಾಗಲಿದೆ.

ರಾಜಧಾನಿ ಬೆಂಗಳೂರಿನಲ್ಲಿಂದು ಗರಿಷ್ಟ ಉಷ್ಣಾಂಶ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಯಾದಗಿರಿಯಲ್ಲಿ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಬೆಂಗಳೂರಿನಲ್ಲಿ 28-19, ಮಂಗಳೂರಿನಲ್ಲಿ 29-14, ಶಿವಮೊಗ್ಗದಲ್ಲಿ 28-21, ಬೆಳಗಾವಿಯಲ್ಲಿ 26-20, ಮೈಸೂರಿನಲ್ಲಿ 30-20, ಮಂಡ್ಯದಲ್ಲಿ 31-21, ಕೊಡಗಿನಲ್ಲಿ 24-17, ರಾಮನಗರದಲ್ಲಿ 32-26, ಹಾಸನದಲ್ಲಿ 27-19, ಚಾಮರಾಜನಗರದಲ್ಲಿ 31-20, ಚಿಕ್ಕಬಳ್ಳಾಪುರದಲ್ಲಿ 28-18, ಕೋಲಾರದಲ್ಲಿ 30-21, ತುಮಕೂರಿನಲ್ಲಿ 29-20, ಉಡುಪಿಯಲ್ಲಿ 29-24, ಚಿಕ್ಕಮಗಳೂರಿನಲ್ಲಿ 26-18, ದಾವಣಗೆರೆಯಲ್ಲಿ 29-21, ಚಿತ್ರದುರ್ಗದಲ್ಲಿ 29-21, ಹಾವೇರಿಯಲ್ಲಿ 29-21, ಬಳ್ಳಾರಿಯಲ್ಲಿ 33-23, ಗದಗದಲ್ಲಿ 29-21, ಕೊಪ್ಪಳದಲ್ಲಿ 31-22, ರಾಯಚೂರಿನಲ್ಲಿ 32-33, ಯಾದಗಿರಿಯಲ್ಲಿ 32-23, ವಿಜಯಪುರದಲ್ಲಿ 29-21, ಬೀದರ್ ನಲ್ಲಿ 28-21, ಕಲಬುರಗಿಯಲ್ಲಿ 31-22, ಬಾಗಲಕೋಟೆಯಲ್ಲಿ 31-22 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

ಹಿಂದಿನ ಲೇಖನಇಂದಿನ ಚಿನ್ನ-ಬೆಳ್ಳಿ ದರದ ವಿವರ
ಮುಂದಿನ ಲೇಖನಪಾಕ್‌ ಡ್ರೋನ್‌ ಗಳ ಮೂಲಕ ಶಸ್ತ್ರಾಸ್ತ್ರ ಪೂರೈಕೆ: ಎನ್‌ಐಎನಿಂದ 8 ಕಡೆ ಶೋಧ