ಮನೆ ರಾಜಕೀಯ ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯು ಬಗ್ಗೆ ನಾಳೆ ಸೂಕ್ತ ನಿರ್ಧಾರ: ಸಚಿವ ಡಾ.ಕೆ.ಸುಧಾಕರ್

ನೈಟ್ ಕರ್ಫ್ಯೂ, ವೀಕೆಂಡ್ ಕರ್ಫ್ಯು ಬಗ್ಗೆ ನಾಳೆ ಸೂಕ್ತ ನಿರ್ಧಾರ: ಸಚಿವ ಡಾ.ಕೆ.ಸುಧಾಕರ್

0

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕಾಗಿ ಜಾರಿ ಮಾಡಲಾಗಿರುವ ನೈಟ್ ಕರ್ಫ್ಯೂ ಮತ್ತು ವಿಕೇಂಡ್ ಕರ್ಫ್ಯೂಗೆ ಸ್ವಪಕ್ಷೀಯರಿಂದಲೇ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನೆಲೆಯಲ್ಲಿ ಇದನ್ನ ಮುಂದವರಿಸಬೇಕೇ ಬೇಡವೇ ಎಂಬುದು ನಾಳೆ ನಿರ್ಧಾರವಾಗಲಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ಧಾರೆ.

ಜನರ ಆರೋಗ್ಯ ದೃಷ್ಠಿಯಿಂದ ನಾಳೇ ಸೂಕ್ತ ನಿರ್ಧಾರ ಕೈಗೊಳ್ಳುತ್ತೇವೆ. ಜನರ ಭಾವನೆ ವಿರೋಧಿಸುವ ಉದ್ದೇಶವಿಲ್ಲ.  ಅನಿವಾರ್ಯ ಪರಿಸ್ಥಿತಿಯಿಂದ ಕೆಲವು ಕ್ರಮಗಳನ್ನು ಕೈಗೊಳ್ಳಲಾಗಿದೆ. ಜನರಿಗೆ ತೊಂದರೆ ಕೊಡುವ ಉದ್ದೇಶ ನಮಗಿಲ್ಲ ಎಂದರು.

ನಾಳಿನ ಸಭೆಯಲ್ಲಿ ಬೆಂಗಳೂರಿಗೆ ಇನ್ನಷ್ಟು ಟಫ್ ರೂಲ್ಸ್ ಬಗ್ಗೆ ನಿರ್ಧಾರ ಮಾಡುತ್ತೇವೆ. ಕಠಿಣ ಕ್ರಮಗಳಿಂದ ಏನೆಲ್ಲಾ ಪರಿಹಾರ ಆಗಿದೆ ಏನೆಲ್ಲ ಕ್ರಮ ತೆಗೆದುಕೊಳ್ಳಬೇಕು ಎಂದು ಚರ್ಚೆ ಮಾಡುತ್ತೇವೆ ಎಂದು ಸಚಿವ ಸುಧಾಕರ್ ಮಾಹಿತಿ ನೀಡಿದ್ದಾರೆ.

ಹಿಂದಿನ ಲೇಖನಗಾಂಜಾ ಮಾರಾಟದಲ್ಲಿ ಪೇದೆಗಳು ಸಿಕ್ಕಿಬಿದ್ದ ಪ್ರಕರಣ: ತನಿಖಾಧಿಕಾರಿಗಳ ಅಮಾನತು, ಡಿಸಿಪಿಗಳಿಗೆ ನೋಟಿಸ್
ಮುಂದಿನ ಲೇಖನಚಕ್ರಕ್ಕೆ ಸಿಲುಕಿದ ಹುರುಳಿಸೊಪ್ಪು: ಅರ್ಧಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲಿ ನಿಂತ ಆಂಬುಲೆನ್ಸ್