ಮನೆ ರಾಜ್ಯ ಮಾವಿನಹಳ್ಳಿ ಸಿದ್ದೆಗೌಡರ ಪರ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ: ಮರಿಗೌಡ ಸ್ಪಷ್ಟನೆ

ಮಾವಿನಹಳ್ಳಿ ಸಿದ್ದೆಗೌಡರ ಪರ ನಿಷ್ಠೆಯಿಂದ ಕೆಲಸ ಮಾಡಿದ್ದೇವೆ: ಮರಿಗೌಡ ಸ್ಪಷ್ಟನೆ

0

ಮೈಸೂರು:  ಮಾವಿನಹಳ್ಳಿ ಸಿದ್ದೆಗೌಡರ ಪರ ನಾವು ನಿಷ್ಠೆಯಿಂದ ಕೆಲಸ ಮಾಡಿದ್ದೇವೆ. ನನ್ನ ಹಾಗೂ ನಮ್ಮ ಕಾರ್ಯಕರ್ತರ ಮೇಲೆ ಸಿದ್ದೇಗೌಡ ಆರೋಪ ಮಾಡಿದ್ದಾರೆ. ಅವರ ಆರೋಪದಲ್ಲಿ ಯಾವುದೇ ಉರುಳಿಲ್ಲ ಎಂದು ಕಾಂಗ್ರೆಸ್ ಮುಖಂಡ ಮರಿಗೌಡ ಸ್ಪಷ್ಟನೆ ನೀಡಿದ್ದಾರೆ.

Join Our Whatsapp Group

ನನ್ನ ವಿರುದ್ದ ಸುಳ್ಳು ಅಪಪ್ರಚಾರಕ್ಕೆ ಮರಿಗೌಡರೇ ಕಾರಣ ಎಂಬ ಚಾಮುಂಡೇಶ್ವರಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡರ ಆರೋಪ ಕುರಿತು ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.

ಸಿದ್ದೇಗೌಡರಿಗೆ ಕಾಂಗ್ರೆಸ್ ಪಕ್ಷದ ಸಂಸ್ಕೃತಿಯೇ ಗೊತ್ತಿಲ್ಲ. ನಾವು ಈಗಲೂ ಸಿದ್ದೆಗೌಡರು ಗೆಲ್ಲುತ್ತಾರೆ ಎಂಬ ಭರವಸೆ ಅಲ್ಲಿದ್ದೇವೆ. ನಮ್ಮ ನಾಯಕರಾದ ಸಿದ್ದರಾಮಯ್ಯ ಅವರ ಮಾತಿನಂತೆ ಒಗ್ಗಟ್ಟಿನಿಂದ ಸಿದ್ದೇಗೌಡ ಪರವಾಗಿ 40 ದಿನ ಕೆಲಸ ಮಾಡಿದ್ದೇವೆ. ಕೊನೆಯ 4 ದಿನ ಅಭ್ಯರ್ಥಿ ಕಾಣೆಯಾಗಿದ್ದಾರೆ ಎಂದು ಕಾರ್ಯಕರ್ತರು ಕಸಿವಿಸಿ ಗೊಂಡಿದ್ದರು. ಇವರು ಯಾಕೆ ಹೀಗೆ ಮಾಡಿದ್ರು ಗೊತ್ತಿಲ್ಲ, ಹಣದ ಕೊರತೆ ಇದ್ರೆ ಜನರ ಬಳಿ ಸತ್ಯ ಹೇಳಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಮೇಲೆ ದೂರುವುದು ತಪ್ಪು ಎಂದು ಮರಿಗೌಡ ಕಿಡಿಕಾರಿದರು.

ಹಿಂದಿನ ಲೇಖನಬೆಂಗಳೂರಿನ ಶೃಂಗೇರಿಮಠ
ಮುಂದಿನ ಲೇಖನಬದುಕಿನ ದರಿದ್ರ ದಿನಗಳನ್ನು ನೆನಪಿಸಿಕೊಂಡ ಅನುಪಮಾ ಗೌಡ