ಮನೆ ರಾಜಕೀಯ ರಾಜಕಾರಣದಲ್ಲಿ ಯಾರು ಸತ್ಯವಂತರು?: ಹೆಚ್.ಡಿ ದೇವೇಗೌಡ ಪ್ರಶ್ನೆ

ರಾಜಕಾರಣದಲ್ಲಿ ಯಾರು ಸತ್ಯವಂತರು?: ಹೆಚ್.ಡಿ ದೇವೇಗೌಡ ಪ್ರಶ್ನೆ

0

ಮೈಸೂರು: ಭ್ರಷ್ಟಾಚಾರ ಎಲ್ಲಾ ಕಡೆ ತುಂಬಿ ಹೋಗಿದೆ. ರಾಜಕಾರಣ ಹೇಳಲಾಗದಷ್ಟು ಕೆಟ್ಟು ಹೋಗಿದೆ. ರಾಜಕಾರಣದಲ್ಲಿ ಯಾರು ಸತ್ಯವಂತರು? ಕಾಂಗ್ರೆಸ್ ‌ನವರು ಏನೂ ಮಾಡಿಯೇ ಇಲ್ವೇ? ಯಾರು ಸಾಚ ಇದ್ದಾರೆ ಹೇಳಿ? ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಪ್ರಶ್ನಿಸಿದ್ದಾರೆ.

ಎಚ್ ಡಿ ಕೋಟೆಯ ಕಬಿನಿ ಡ್ಯಾಂ ಬಳಿ ಜೆಡಿಎಸ್ ಪಕ್ಷದಿಂದ ಹಮ್ಮಿಕೊಂಡಿರುವ ಜನತಾ ಜಲಧಾರೆ ಕಾರ್ಯಕ್ರಮವನ್ನು ಇಂದು ದೇವೇಗೌಡ ಅವರು ಉದ್ಘಾಟಿಸಿದರು.

ಬಳಿಕ ಸುದ್ದಿಗಾರರೊಂದಿಗೆ ರಾಜ್ಯದಲ್ಲಿ ಎದ್ದಿರುವ ಪರ್ಸೆಂಟೇಜ್ ವಿಚಾರ ಸಂಬಂಧ ಮಾತನಾಡಿ, ರಾಜಕಾರಣದಲ್ಲಿ ಯಾರೂ ಸತ್ಯವಂತರು? ಅವರ ಮೇಲೆ ಇವರು, ಇವರ ಮೇಲೆ ಅವರು ಮಾತನಾಡುತ್ತಾರೆ. ಕಾಂಗ್ರೆಸ್ ‌ನವರು ಏನೂ ಮಾಡಿಯೇ ಇಲ್ವೇ? ಯಾರು ಸಾಚ ಇದ್ದಾರೆ ಹೇಳಿ? ಎಂದು ಪ್ರಶ್ನಿಸಿದರು.

ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗ ಶೇ.10 ಸರ್ಕಾರ ಎಂದು ಪ್ರಧಾನಿಯವರೇ ಆರೋಪ ಮಾಡಿದ್ದರು. ಆಗ ನಾನು ಯಾವುದೇ ಆರೋಪ ಮಾಡಿರಲಿಲ್ಲ. ಈಗಲೂ ಅಷ್ಟೇ. ‌ಪರ್ಸೆಂಟೇಜ್ ವಿಚಾರಕ್ಕೆ ನಾನು ಪ್ರತಿಕ್ರಿಯೆ ನೀಡುವುದಿಲ್ಲ. ಗುತ್ತಿಗೆದಾರರ ಸಂಘದ 40 ಪರ್ಸೆಂಟ್​​ ಕಮಿಷನ್ ಆರೋಪಕ್ಕೂ ನನಗೂ ಸಂಬಂಧವಿಲ್ಲ. ನನ್ನ‌ ಮಗ ನೀರಾವರಿ ಸಚಿವ ಅಥವಾ ಪಿಡಬ್ಲ್ಯೂಡಿ ಮಿನಿಸ್ಟರ್ ಆಗಿದ್ದರೇ ನಾನು ಮಾತನಾಡುತ್ತಿದ್ದೆ. ಈಗ ಆರೋಪಕ್ಕೂ ನನಗೂ ಸಂಬಂಧವಿಲ್ಲ. ಆರೋಪ ಮಾಡಿಕೊಳ್ಳಲಿ ಬಿಡಿ ನಮಗೇನು ಎಂದು ಹೇಳಿದರು.

ಬಿಜೆಪಿ ಜತೆ ಚುನಾವಣಾ ಪೂರ್ವ ಮೈತ್ರಿ ವಿಚಾರದಲ್ಲಿ ಕೆಲವರು ಉತ್ಪ್ರೇಕ್ಷೆಯಿಂದ ಮಾತನಾಡುತ್ತಾರೆ. ಜೆಡಿಎಸ್ ಕಾರ್ಯಕ್ರಮ ನೋಡಿ ಒಂದಲ್ಲಾ ಒಂದು ಬಣ್ಣ ಕಟ್ಟುತ್ತಾರೆ. ನಮ್ಮ ಜೊತೆ ಇಲ್ಲಿಗೆ ಯಾರಾದರೂ ಬಂದಿದ್ದಾರೆಯೇ?, ಸುಮ್ಮನೆ ಯಾರೋ ಏನೇನೋ ಹೇಳುತ್ತಾರೆ, ಹೇಳಲಿ ಬಿಡಿ ಎಂದು ತಿಳಿಸಿದರು.

ಟ್ರಿಬ್ಯೂನಲ್ ಅಕ್ಟ್ ಬಗ್ಗೆ ಬಿಜೆಪಿ ಆಗಲಿ ಕಾಂಗ್ರೆಸ್ ನವರಾಗಲಿ ಮಾತನಾಡಿಲ್ಲ ಇದು ನಮ್ಮ ರಾಜ್ಯದ ದುರಾದೃಷ್ಟ ನೀರಾವರಿ ವಿಚಾರದಲ್ಲಿ ನಮ್ಮ ಪರ ಯಾರು ಇಲ್ಲ. ಕರ್ನಾಟಕಕ್ಕೆ ನೀರಾವರಿ ವಿಚಾರದಲ್ಲಿ ವಂಚನೆ ಆಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ನಾನು ಅಧಿಕಾರದಲ್ಲಿ ಇದ್ದಾಗ ಒಬ್ಬ ಸಾಮಾನ್ಯ ರೈತನ ಮಗನಾಗಿ ಫೈಲ್ ತರಿಸಿ ಸೈನ್ ಮಾಡಿದ್ದೆ. ಈ ಬಗ್ಗೆ ತುಂಬ ವಿಚಾರಗಳು ಇವೆ. ಇದು ಒಂದು ಜಾತಿಯ ಪ್ರಶ್ನೆ ಆಲ್ಲ, ವ್ಯಕ್ತಿಯ ಪ್ರಶ್ನೆ ಅಲ್ಲ, ಇದು ಈ‌ ನಾಡಿನ ಜನರ ಪ್ರಶ್ನೆ ಆಗಿದೆ. ಕಬಿನಿ ಡ್ಯಾಂ ಕೆಲಸ ನಿಂತಿತ್ತು ಅನೇಕ ವಿಚಾರವಾಗಿ ಅಕ್ಷೇಪ ಇತ್ತು. ಅದರೆ ನಾನು ಅಂದು ಹೋರಾಟ ಮಾಡಿದೆ. ನಾನು ಒಬ್ಬ ರೈತನಾಗಿ ಈ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೇನೆ. ನನ್ನ ಕಾಲಿನಲ್ಲಿ ಶಕ್ತಿ ಇಲ್ಲ ಅದ್ರೆ ನನ್ನ ತಲೆಯಲ್ಲಿ ಶಕ್ತಿ ಇದೆ ನಿಮ್ಮ ಜೊತೆ ನಾನು ಇದ್ದೇನೆ ಎಂದು ಹೇಳಿದರು.

ಹಿಂದಿನ ಲೇಖನಕೊರೊನಾ: 975 ಹೊಸ ಪ್ರಕರಣ ಪತ್ತೆ
ಮುಂದಿನ ಲೇಖನಟಿಟಿಇ ಸೋಗಿನಲ್ಲಿ ಜನರಿಗೆ ಮೋಸ ಮಾಡುತ್ತಿದ್ದ ವ್ಯಕ್ತಿಯ ಬಂಧನ