ಮನೆ ರಾಜಕೀಯ ಸಿಎಂ ಆಗಬೇಕಾದರೆ ಲಂಚ ಕೊಡಬೇಕೆಂಬ ಯತ್ನಾಳ್ ಆರೋಪ: ತನಿಖೆಗೆ ಡಿಕೆಶಿ ಒತ್ತಾಯ

ಸಿಎಂ ಆಗಬೇಕಾದರೆ ಲಂಚ ಕೊಡಬೇಕೆಂಬ ಯತ್ನಾಳ್ ಆರೋಪ: ತನಿಖೆಗೆ ಡಿಕೆಶಿ ಒತ್ತಾಯ

0

ಬೆಂಗಳೂರು(Bengaluru): ಸಿಎಂ ಆಗಬೇಕಾದರೆ ಎರಡುವರೆ ಸಾವಿರ ಕೋಟಿ ಕೊಡಬೇಕೆಂದು ಯತ್ನಾಳ್ ಆರೋಪಿಸಿದ್ದು, ಈ ಬಗ್ಗೆ ಕೂಡಲೇ ತನಿಖೆ ನಡೆಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಸಿಎಂ ಆಗಬೇಕಾದರೆ ಎರಡೂವರೆ ಸಾವಿರ ಕೋಟಿ, ಮಂತ್ರಿಯಾಗಬೇಕಾದರೆ 100 ಕೋಟಿ‌ ಕೊಡಬೇಕೆಂದು ಯತ್ನಾಳ್ ಅವರೇ ಆರೋಪಿಸಿದ್ದಾರೆ. ಯತ್ನಾಳ್ ಹೇಳಿಕೆ ಬಗ್ಗೆ ಕೂಡಲೇ ತನಿಖೆ ಆಗಬೇಕು. ಎಲ್ಲಾ ಇಲಾಖೆಗೂ ರೇಟ್ ಫಿಕ್ಸ್ ಮಾಡಿದ್ದಾರೆ. ಯತ್ನಾಳ್ ಹೇಳಿಕೆ ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಬೇಕು ಎಂದು ಒತ್ತಾಯಿಸಿದರು.

ಕೋವಿಡ್ ಸಾವಿನ ಲೆಕ್ಕ ಮುಚ್ಚಿಟ್ಟ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೊದಲಿನಿಂದ ಹೆಚ್ಚು ಸಾವು ಆಗ್ತಿದೆ ಅಂತ ನಾನು ಸಿದ್ದರಾಮಯ್ಯ ಎಲ್ಲರೂ ಹೇಳುತ್ತಿದ್ದೆವು. 4.5 ಲಕ್ಷ ಜನ ಮೃತಪಟ್ಟಿದ್ದಾರೆ ಅಂತ ಹೇಳಿದ್ದೆವು. ನಮ್ಮ ತಾಲೂಕಿನಲ್ಲಿ 500 ಜನ ಸಾವನ್ನಪ್ಪಿದ್ದರು. ಸರ್ಕಾರ 100 ಜನ ಅಂತ ಹೇಳಿತ್ತು. ಈವರೆಗೆ ಯಾರಿಗೂ ಪರಿಹಾರ ಕೊಟ್ಟಿಲ್ಲ ಎಂದು ಆರೋಪಿಸಿದರು.

WHO 47 ಲಕ್ಷ ಜನ ಮೃತಪಟ್ಟಿದ್ದಾರೆ ಅಂದಿದೆ. ಇದು ದೇಶಕ್ಕೆ ಬಿಜೆಪಿ ಸರ್ಕಾರ ಕೊಟ್ಟ ಗಿಫ್ಟ್. ಸುಪ್ರೀಂ ಕೋರ್ಟ್ ಕೂಡಾ ಪರಿಹಾರ ‌ಕೊಡಿ ಎಂದಿದೆ. ಆರೋಗ್ಯ ಸಚಿವರು ಇದನ್ನ ಮುಚ್ಚಿ ಹಾಕ್ತಿದ್ದಾರೆ. ಸಿಎಂ ಕೂಡಲೇ‌ ಮತ್ತೆ ಸಭೆ ಮಾಡಬೇಕು. ಮೃತಪಟ್ಟವರ ಕುಟುಂಬಸ್ಥರಿಗೆ ತಲಾ 5 ಲಕ್ಷ ಪರಿಹಾರ ಕೊಡಬೇಕು ಎಂದು ಆಗ್ರಹಿಸಿದರು.

ಹಿಂದಿನ ಲೇಖನವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ಕಾರ್ಯಕರ್ತರ ಪ್ರತಿಭಟನೆ
ಮುಂದಿನ ಲೇಖನಬಿಬಿಎಂಪಿ ಮುಖ್ಯ ಆಯುಕ್ತರಾಗಿ ತುಷಾರ್ ಗಿರಿನಾಥ್ ಅಧಿಕಾರ ಸ್ವೀಕಾರ