ಮನೆ ಸುದ್ದಿ ಜಾಲ ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ: ರಾಜಪಥ್ ನಲ್ಲಿ ಪರೇಡ್ ಪ್ರಾರಂಭ

ಧ್ವಜಾರೋಹಣ ನೆರವೇರಿಸಿದ ರಾಷ್ಟ್ರಪತಿ: ರಾಜಪಥ್ ನಲ್ಲಿ ಪರೇಡ್ ಪ್ರಾರಂಭ

0

ನವದೆಹಲಿ: 73ನೇಗಣರಾಜ್ಯೋತ್ಸವದ ಅಂಗವಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ತ್ರಿವರ್ಣ ಧ್ವಜಾರೋಹಣ ನೆರವೇರಿಸಿದ್ದಾರೆ.  ರಾಷ್ಟ್ರಪತಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಸಾಥ್ ನೀಡಿದರು.

ಧ್ವಜಾರೋಹಣದ ಬಳಿಕ ರಾಷ್ಟ್ರಪತಿಗಳು ಗೌರವ ವಂದನೆ ಸ್ವೀಕರಿಸಿದ್ದು, ಅಶೋಕ ಚಕ್ರ ಪ್ರದಾನ ಮಾಡಿದ್ದಾರೆ. 9 ಉಗ್ರರನ್ನು ಹೊಡೆದುರುಳಿಸಿದ್ದ ಜಮ್ಮು-ಕಾಶ್ಮೀರದ ಹುತಾತ್ಮ ಎಎಸ್ ಐ ಬಾಬು ರಾಮ್ ಅವರ ಕುಟುಂಬ ಸದಸ್ಯರು ಅಶೋಕ ಚಕ್ರ ಪದಕವನ್ನು ಸ್ವೀಕರಿಸಿದರು. ಈ ಬಳಿಕ ರಾಜ್ ಪಥ್ ನಲ್ಲಿ ಪರೇಡ್ ಪ್ರಾರಂಭವಾಗಿದೆ.

ಧ್ವಜಾರೋಹಣಕ್ಕೂ ಮುನ್ನ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹುತಾತ್ಮ ಯೋಧರಿಗೆ ನಮನ ಸಲ್ಲಿಸಿದರು. ಪ್ರಧಾನಿ ನರೇಂದ್ರ ಮೋದಿಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಾಥ್ ನೀಡಿದ್ದರು.

ಹಿಂದಿನ ಲೇಖನಕರಾಮುವಿಗೆ ಯುಜಿಸಿಯಿಂದ ‘ಅತ್ಯುತ್ತಮ ಶ್ರೇಯಾಂಕ’
ಮುಂದಿನ ಲೇಖನಪ್ರಾಮಾಣಿಕ‌ ಚುನಾವಣೆಗಳು ನಡೆಯಬೇಕು: ಎಚ್‌ಡಿಕೆ