ಮನೆ ಅಪರಾಧ ಅರ್ಚಕನ ಪ್ರೀತಿಗೆ ಬಿದ್ದ ಗೃಹಿಣಿ: 10 ದಿನಕ್ಕೆ ಬೀದಿಪಾಲು

ಅರ್ಚಕನ ಪ್ರೀತಿಗೆ ಬಿದ್ದ ಗೃಹಿಣಿ: 10 ದಿನಕ್ಕೆ ಬೀದಿಪಾಲು

0

ಮೈಸೂರು(Mysuru) : ಎರಡು ಮಕ್ಕಳ ತಾಯಿಯೊಬ್ಬಳು ಅರ್ಚಕನೊಬ್ಬನ ಪ್ರೀತಿಯಲ್ಲಿ ಬಿದ್ದು ಇದೀಗ ಬೀದಿ ಪಾಲಾಗಿರುವ ಘಟನೆ ತಾಲೂಕಿನ ಕೊಲ್ಲುಪುರ ಗ್ರಾಮದಲ್ಲಿ ನಡೆದಿದೆ.

ಗೃಹಿಣಿಯನ್ನು ಪ್ರೀತಿಸಿ ಮದುವೆಯಾಗುವ ನಾಟಕವಾಡಿ ತನ್ನ ದೈಹಿಕ ಬಯಕೆ ತೀರಿಸಿಕೊಂಡು ಅರ್ಚಕ ಕೈಕೊಟ್ಟು ಪರಾರಿಯಾಗಿದ್ದಾನೆ.

ಪ್ರಕರಣದ ವಿವರ:

ಗೃಹಿಣಿ ತಮ್ಮ ಕುಟುಂಬದ ವೈಯುಕ್ತಿಕ ಸಮಸ್ಯೆಗಳಿಗೆ ಪರಿಹಾರವನ್ನು ಕೇಳಲು ದೇವಸ್ಥಾನಕ್ಕೆ ಹೋಗುತ್ತಿದ್ದಳು, ಅಲ್ಲಿದ್ದ 28 ವರ್ಷದ ಅರ್ಚಕ ಸಂತೋಷ್ ಎಂಬ ವ್ಯಕ್ತಿಯ ಜೊತೆ ಸ್ನೇಹ ಬೆಳೆದು, ಬಳಿಕ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದಾರೆ. ನಂತರ ಸಂತೋಷ್ ಆಕೆಯೊಟ್ಟಿಗೆ ಎಲ್ಲೆಡೆ ಸುತ್ತಾಡಿ, ದೈಹಿಕ ಸಂಬಂಧ ಬೆಳೆಸಿಕೊಂಡಿದ್ದು ಇದೀಗ ನಿರ್ಜನ ಪ್ರದೇಶದಲ್ಲಿ ಒಬ್ಬಂಟಿಯಾಗಿ ಬಿಟ್ಟು ಪರಾರಿಯಾಗಿದ್ದಾನೆ.

ಈ ವೇಳೆ ಗ್ರಾಮಸ್ಥರ ಕಣ್ಣಿಗೆ ಬಿದ್ದ ಗೃಹಿಣಿಯನ್ನು ವಿಚಾರಿಸಿದಾಗ ಘಟನೆಯನ್ನು ವಿವರಿಸಿದ್ದಾಳೆ. ಗ್ರಾಮಸ್ಥರು ಹುಲ್ಲಳ್ಳಿ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು. ಗೃಹಿಣಿಯನ್ನು ರಕ್ಷಿಸಲಾಗಿದೆ. ಅರ್ಚಕ ಸಂತೋಷ್ ವಿರುದ್ಧ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.