ಮೈಸೂರು(Mysuru): ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮದ ಪ್ರಕಾರ ಆಗಸ್ಟ್ 24 ರಿಂದ ಸಾರಿಗೆ ವರ್ಗದ ವಾಹನಗಳಿಗೆ ವಾಹನದ ಅರ್ಹತಾ ಪತ್ರ ನೀಡಿಕೆ/ ನವೀಕರಣ ಸಮಯದಲ್ಲಿ ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸಿರುವುದನ್ನು ಕಡ್ಡಾಯಗೊಳಿಸಲಾಗಿದ್ದು, ಇದು ಆಟೋ ಹಾಗೂ ಲಾರಿ ಚಾಲಕರಿಗೆ ಸಾಕಷ್ಟು ತೊಂದರೆ ಉಂಟಾಗಿದೆ.
ಕೇಂದ್ರ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 104ರ ಅಡಿ AIS: 089, AIS: 090 ಮತ್ತು AIS: 057 ಪುಕಾರ ರಾಜ್ಯದ ಎಲ್ಲಾ ಸಾರಿಗೆ ವಾಹನಗಳಿಗೆ ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸುವಂತೆ ಸೂಚಿಸಲಾಗಿದೆ.
ಸಾರಿಗೆ ವರ್ಗದ ವಾಹನಗಳಿಗೆ ಅರ್ಹತಾ ಪತ್ರ ನೀಡಿಕೆ/ ನವೀಕರಣ ಸಮಯದಲ್ಲಿ ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸಿರುವುದನ್ನು ವೆಬ್ ಬೇಸ್ಡ್ ಸಾಫ್ಟ್’ವೇರ್ ಮೂಲಕ ಪರೀಕ್ಷಿಸಲು ಕ್ರಮ ವಹಿಸುವಂತೆ ಸೂಚಿಸಲಾಗಿದೆ. ಹಾಗೂ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲನೆಯಾಗುತ್ತಿರುವ ಬಗ್ಗೆ ಪರಿಶೀಲನೆ ನಡೆಸುವಂತೆ ಹಾಗೂ ಈ ಬಗ್ಗೆ ಯಾವುದೇ ದೂರುಗಳಿಗೆ ಅವಕಾಶ ನೀಡದಂತೆ ಕುಮವಹಿಸಲೂ ಸಹ ಆದೇಶಿಸಿದೆ.
ಆದರೆ ಈ ಕುರಿತು ಸಮರ್ಪಕ ಮಾಹಿತಿ ಇಲ್ಲದ ಕಾರಣ ಆಟೋ ಹಾಗೂ ಲಾರಿ ಚಾಲಕರು ಪರದಾಡುವಂತಾಗಿದೆ. ಅಲ್ಲದೇ ಆರ್’ಟಿಓ ಅಧಿಕಾರಿಗಳು ಕೂಡ ಸಮರ್ಪಕ ಮಾಹಿತಿ ನೀಡದ ಕಾರಣ ಯಾರಿಂದ ಮಾಹಿತಿ ಪಡೆಯಬೇಕು, ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಯಾರು ಅಳವಡಿಸುತ್ತಾರೆ ಎಂಬ ಮಾಹಿತಿ ಲಭ್ಯವಾಗದೇ ಪರಿತಪಿಸುವ ಸ್ಥಿತಿ ಚಾಲಕರದ್ಧಾಗಿದೆ.
ಅಲ್ಲದೇ ದಿನವಿಡೀ ಆರ್’ಟಿಓ ಕಚೇರಿಯಲ್ಲಿ ಕುಳಿತರೇ ಬಾಡಿಗೆ ಹೊಡೆಯಲು ಸಾಧ್ಯವಾಗುವುದಿಲ್ಲ. ಇದರಿಂದ ಚಾಲಕರು ಸಾಕಷ್ಟು ನಷ್ಟವನ್ನು ಅನುಭವಿಸುವಂತಾಗಿದೆ.
ರೆಟ್ರೋ ರಿಫ್ಲೆಕೇಟಿವ್ ಟೇಪ್ ಮತ್ತು ರೇರ್ ಮಾರ್ಕಿಂಗ್ ಫ್ಲೇಟ್ ಅಳವಡಿಸಲು ಆರ್’ಟಿಒ ಕಚೇರಿ ಅಧಿಕಾರಿಗಳು ಖಾಸಗಿ ಡ್ರೈವಿಂಗ್ ಸ್ಕೂಲ್ ಗೆ ತೆರಳುವಂತೆ ಸೂಚಿಸುತ್ತಿದ್ದು, ಖಾಸಗಿ ಡ್ರೈವಿಂಗ್ ಸ್ಕೂಲ್ ನಲ್ಲಿ ಮನಬಂದಂತೆ ದರ ವಿಧಿಸುತ್ತಿರುವುದು ಆಟೋ, ಲಾರಿ ಹಾಗೂ ಮುಂತಾದ ಸಾರಿಗೆ ವಾಹನಗಳ ಚಾಲಕರನ್ನು ಸಂಕಷ್ಟಕ್ಕೆ ದೂಡಿದೆ.
ಆದ್ದರಿಂದ ಸರ್ಕಾರ ಹಾಗೂ ಅಧಿಕಾರಿಗಳು ಇನ್ನು ಮುಂದಾದರು ಎಚ್ಚೆತ್ತುಕೊಂಡು ಚಾಲಕರ ಸಮಸ್ಯೆ ಪರಿಹರಿಸುವತ್ತ ಗಮನ ಹರಿಸಬೇಕಾಗಿದೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.