ಮನೆ ರಾಜ್ಯ ಚಾಮರಾಜನಗರ: ಭತ್ತ ನಾಟಿ ಮಾಡುತ್ತಿದ್ದ ರೈತ ಸಿಡಿಲು ಬಡಿದು ಸಾವು

ಚಾಮರಾಜನಗರ: ಭತ್ತ ನಾಟಿ ಮಾಡುತ್ತಿದ್ದ ರೈತ ಸಿಡಿಲು ಬಡಿದು ಸಾವು

0

ಚಾಮರಾಜನಗರ(Chamarajanagar): ಭತ್ತ ನಾಟಿ ಮಾಡುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಸಾವನ್ನಪ್ಪಿರುವ ಘಟನೆ  ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದಲ್ಲಿ ನಡೆದಿದೆ.

ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ರೇವಣ್ಣ (46) ಮೃತ ದುರ್ದೈವಿ.

ಸಿಡಿಲು ಬಡಿದ ರೈತನನ್ನು ತಕ್ಷಣ ಯಳಂದೂರು ಆಸ್ಪತ್ರೆಗೆ ದಾಖಲು ಮಾಡಿದ್ದು, ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ‌‌.

ಕಾಳಜಿ ಕೇಂದ್ರದ ಊಟ ಸವಿದ ಡಿಸಿ: ನೆರೆಯಿಂದಾಗಿ ನಲುಗಿದ ಯಳಂದೂರು, ಕೊಳ್ಳೇಗಾಲ ತಾಲೂಕಿನ ಗ್ರಾಮಗಳಲ್ಲಿ ಕಾಳಜಿ ಕೇಂದ್ರಕ್ಕೆ ತೆರಳಿದ್ದು, ಎಲ್ಲಾ ಕಾಳಜಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿದರು.

ಮೊದಲಿಗೆ ಯಳಂದೂರು ತಾಲೂಕಿನ ಕೃಷ್ಣಾಪುರದಲ್ಲಿರುವ ಕಾಳಜಿ‌ ಕೇಂದ್ರಕ್ಕೆ ತೆರಳಿ ಸಂತ್ರಸ್ತರೊಟ್ಟಿಗೆ ಊಟ ಸವಿದರು.

ಬಳಿಕ ಮಾಂಬಳ್ಳಿ, ಕೊಳ್ಳೇಗಾಲ ಕಾಳಜಿ ಕೇಂದ್ರಗಳಿಗೆ ಭೇಟಿಕೊಟ್ಟು ಜನರ ಅಹವಾಲನ್ನು ಆಲಿಸಿದ್ದಾರೆ. ಯಾವುದಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.