ಮನೆ ಅಪರಾಧ ಚಾಮರಾಜನಗರ: ಬಸ್ ಪಲ್ಟಿ,  ಚಾಲಕ ಸೇರಿ ಐವರಿಗೆ ಗಾಯ

ಚಾಮರಾಜನಗರ: ಬಸ್ ಪಲ್ಟಿ,  ಚಾಲಕ ಸೇರಿ ಐವರಿಗೆ ಗಾಯ

0

ಚಾಮರಾಜನಗರ(Chamarajanagara): ತಮಿಳುನಾಡಿನ ವಿವಿಧ ಭಾಗಗಳಿಂದ ತಾಳವಾಡಿಗೆ ಬರುತ್ತಿದ್ದ ಬಸ್ ಪುಣಜನೂರು ಸಮೀಪ ಪಲ್ಟಿಯಾಗಿದ್ದು, ಅಪಘಾತದಲ್ಲಿ ಚಾಲಕ ಸೇರಿ ಐವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಈರೋಡ್, ಸತ್ಯಮಂಗಲಂ ಭಾಗಗಳಿಂದ ತಾಳವಾಡಿಯ ಮಸೀದಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಭಾಗಿಯಾಗಲು ಇವರು ಬರುತ್ತಿದ್ದರು ಎಂದು ತಿಳಿದುಬಂದಿದೆ.

ಚಾಲಕನ ನಿಯಂತ್ರಣ ತಪ್ಪಿ ತಿರುವಿನಲ್ಲಿ ಬಸ್ ಅಪಘಾತಕ್ಕೀಡಾಗಿದೆ. ಗಾಯಾಳುಗಳು ಕಾರಿನಲ್ಲಿ ಸತ್ಯಮಂಗಲಂಗೆ ವಾಪಸ್ ಹಿಂತಿರುಗಿದ್ದಾರೆ.

ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಬಸ್ ತೆರವುಗೊಳಿಸಿ, ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಚಾಮರಾಜನಗರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.