ಮನೆ ಅಪರಾಧ ಚಿರತೆ ದಾಳಿಗೆ ರೈತ ಬಲಿ

ಚಿರತೆ ದಾಳಿಗೆ ರೈತ ಬಲಿ

0

ಚಾಮರಾಜನಗರ(Chamarajanagar): ಹಸು ಮೇಯಿಸಲು ತೆರಳಿದ್ದ ರೈತ ಹಾಗೂ ಕರುವೊಂದರ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿರುವ ಘಟನೆ ಹನೂರು ತಾಲೂಕಿನ ಕೆವಿಎಂ ದೊಡ್ಡಿ ಗ್ರಾಮದಲ್ಲಿ ನಡೆದಿದೆ.

ಕೆವಿಎಂ ದೊಡ್ಡಿ ಗ್ರಾಮದ ಗೋವಿಂದಯ್ಯ (65) ಮೃತಪಟ್ಟವರು.‌

ಚಿರತೆಯು ರೈತನ ಬಲಗಾಲನ್ನು ತಿಂದು ಪರಾರಿಯಾಗಿದೆ ಎನ್ನಲಾಗಿದೆ. ಸುದ್ದಿ ತಿಳಿಯುತ್ತಿದ್ದಂತೆ ರೈತ ಮುಖಂಡರು, ಅರಣ್ಯಾಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.