ಮನೆ ಅಪರಾಧ ಚಿಕ್ಕಮಗಳೂರು: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

ಚಿಕ್ಕಮಗಳೂರು: ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯ

0

ಚಿಕ್ಕಮಗಳೂರು(Chikkamagaluru) : ಸ್ನೇಹಿತರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ತರೀಕೆರೆ ಪಟ್ಟಣದ ಎಪಿಎಂಸಿ ಯಾರ್ಡ್’ನಲ್ಲಿ ನಡೆದಿದೆ.

ಓಂಕಾರ (30) ಗಲಾಟೆಯಲ್ಲಿ ಕೊಲೆಯಾದ ದುರ್ದೈವಿ.

ಸುನೀಲ್, ಸಂತೋಷ್, ಧನರಾಜ್ ಸೇರಿ ಐದು ಮಂದಿ ಸೇರಿಕೊಂಡು ಸ್ನೇಹಿತ ಓಂಕಾರನನ್ನು ಕೊಲೆಗೈದಿರುವ ಆರೋಪಿಗಳು.

ಹಣಕಾಸಿನ ವಿಚಾರದಲ್ಲಿ ಸ್ನೇಹಿತರ ನಡುವೆ ಜಗಳ ನಡೆದಿದೆ ಎನ್ನಲಾಗಿದ್ದು, ಜಗಳ ವಿಕೋಪಕ್ಕೆ ತಿರುಗಿ ಐವರು ಸೇರಿ ಓಂಕಾರನನ್ನು ಕೊಲೆಗೈದಿದ್ದಾರೆ.

ಘಟನೆಗೆ ಸಂಬಂಧಿಸಿ ಸುನೀಲ್, ಸಂತೋಷ್, ಧನರಾಜ್ ನನ್ನು ತರೀಕೆರೆ ಪೊಲೀಸರು ಬಂಧಿಸಿದ್ದು ಇಬ್ಬರು ತಲೆಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.