ಮನೆ ರಾಷ್ಟ್ರೀಯ ಕಾರು – ಟ್ರಕ್‌ ಅಪಘಾತ: ಏಳು ಮಂದಿಗೆ ಗಾಯ

ಕಾರು – ಟ್ರಕ್‌ ಅಪಘಾತ: ಏಳು ಮಂದಿಗೆ ಗಾಯ

0

ತಿರುವನಂತಪುರಂ:  ಕಾರು, ಟ್ರಕ್‌ ಗೆ ಢಿಕ್ಕಿಯಾದ ಪರಿಣಾಮ ಕೇರಳ ಗೃಹ ಕಾರ್ಯದರ್ಶಿ ಡಾ.ವಿ.ವೇಣು ದಂಪತಿ ಸೇರಿದಂತೆ 7 ಮಂದಿ ಗಾಯಗೊಂಡಿದ್ದು, ಓರ್ವನ ಸ್ಥಿತಿ ಗಂಭೀರವಾಗಿದೆ.

ಆಲಪ್ಪುಳ ಜಿಲ್ಲೆಯ ಕೊಟ್ಟುಕುಲಂಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ (ಜ.9 ರಂದು) ಮುಂಜಾನೆ ಅಪಘಾತ ಸಂಭವಿಸಿದ್ದು, ಐಎಎಸ್‌ ದಂಪತಿ ಡಾ.ವೇಣು, ಶಾರದ ಮುರಳೀಧರನ್ ಮಗ ಶಬರಿ, ಚಾಲಕ ಅಭಿಲಾಶ್ ಹಾಗೂ ಕಾರಿನಲ್ಲಿದ್ದ ಇತರರಿಗೆ ಗಾಯಗಳಾಗಿವೆ.

ವೇಣು ಕುಟುಂಬ ಕಾರಿನಲ್ಲಿ ಕೊಚ್ಚಿಯಿಂದ ತಿರುವನಂತಪುರಕ್ಕೆ ತೆರಳುತ್ತಿತ್ತು. ಟ್ರಕ್ ಎರ್ನಾಕುಲಂ ಕಡೆಗೆ ಹೋಗುತ್ತಿತ್ತು. ಟ್ರಕ್‌ ಕಾರಿಗೆ ಢಿಕ್ಕಿ ಹೊಡೆದಿದೆ. ಪರಿಣಾಮ ಕಾರಿನಲ್ಲಿದ್ದವರು ಗಾಯಗೊಂಡಿದ್ದಾರೆ.

ಘಟನೆಯಲ್ಲಿ ವೇಣು ಅವರ ಮೂಗು, ಹಣೆ ಮತ್ತು ಮೂತ್ರಕೋಶದ ಮೇಲೆ ಗಾಯಗಳಾಗಿವೆ. ಸದ್ಯ ಅವರನ್ನು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿ ತಿಳಿಸಿದೆ.