ಮನೆ ಅಪರಾಧ ಕರ್ತವ್ಯ ನಿರತ ಸಿಪಿಐ ಮೇಲೆ ಹಲ್ಲೆ: ಮಾಜಿ ಕಾರ್ಪೋರೇಟರ್ ಬಂಧನ

ಕರ್ತವ್ಯ ನಿರತ ಸಿಪಿಐ ಮೇಲೆ ಹಲ್ಲೆ: ಮಾಜಿ ಕಾರ್ಪೋರೇಟರ್ ಬಂಧನ

0

ಬೆಂಗಳೂರು(Bengaluru): ಕರ್ತವ್ಯನಿರತ ಸಿಪಿಐ ಮೇಲೆ ಹಲ್ಲೆ ಮಾಡಿದ ಆರೋಪದಡಿಯಲ್ಲಿ ಯಲಚೇನಹಳ್ಳಿ ವಾರ್ಡ್ ನಂ.​185ರ ಮಾಜಿ ಕಾರ್ಪೊರೇಟರ್ ವಿ.ಬಾಲಕೃಷ್ಣನನ್ನು  ಕಗ್ಗಲೀಪುರ ಪೊಲೀಸರು ಬಂಧಸಿದ್ದಾರೆ.

ಗುರುವಾರ ಸಂಜೆ ವಿ.ಬಾಲಕೃಷ್ಣ ಮತ್ತು ಸಿಪಿಐ ವಿಜಯ್ ಕುಮಾರ್​ ನಡುವೆ ಮಾತಿನ ಚಕಮಕಿ ನಡೆದಿದೆ. ಈ ಸಂದರ್ಭದಲ್ಲಿ ವಿ.ಬಾಲಕೃಷ್ಣ, ಸಿಪಿಐ ವಿಜಯ್ ಕುಮಾರ್ ಅವರ ಕತ್ತಿನ ಪಟ್ಟಿ ಹಿಡಿದು ಹಲ್ಲೆ ನಡೆಸಿದ್ದಾರೆಂದು ಆರೋಪ ಕೇಳಿಬಂದಿದೆ.

ಸಿಪಿಐ ವಿಜಯ್ ಕುಮಾರ್ ದೂರಿನ ಮೇರೆಗೆ, ಕಗ್ಗಲೀಪುರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 353 ಕರ್ತವ್ಯ ನಿರತ ಸರ್ಕಾರಿ ಅಧಿಕಾರಿ ಮೇಲೆ ಹಲ್ಲೆ, ಐಪಿಸಿ ಸೆಕ್ಷನ್ 332-ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ತಕ್ಷಣವೇ​ ಕಗ್ಗಲೀಪುರ ಪೊಲೀಸರು ವಿ. ಬಾಲಕೃಷ್ಣನನ್ನು ವಶಕ್ಕೆ ಪಡೆದಿದ್ದಾರೆ.

ಇಂದು (ಜ.20) ಪೊಲೀಸರು ಆರೋಪಿಯನ್ನು ಕೋರ್ಟ್​ಗೆ ಹಾಜರು ಪಡಿಸಲಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವ ಸಾಧ್ಯತೆ ಇದೆ.