ಮನೆ ರಾಜ್ಯ 23 ಮಂದಿ ಡಿವೈಎಸ್’ಪಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

23 ಮಂದಿ ಡಿವೈಎಸ್’ಪಿಗಳನ್ನು ವರ್ಗಾವಣೆ ಮಾಡಿದ ರಾಜ್ಯ ಸರ್ಕಾರ

0

ಬೆಂಗಳೂರು(Bengaluru): ರಾಜ್ಯದ ಆಡಳಿತ ವರ್ಗದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ 23 ಮಂದಿ ಡಿವೈಎಸ್’ಪಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಗಜೇಂದ್ರ ಪ್ರಸಾದ್ ಅವರನ್ನು ಮಡಿಕೇರಿ ಉಪ ವಿಭಾಗದಿಂದ ಮೈಸೂರು ಜಿಲ್ಲೆಯ ವಿಜಯನಗರ ಉಪ ವಿಭಾಗಕ್ಕೆ, ಪುಟ್ಟಸ್ವಾಮಿ ಗೌಡ ಟಿ.ಆರ್. ಅವರನ್ನು ಮೈಸೂರು ಕರ್ನಾಟಕ ಪೊಲೀಸ್ ಅಕಾಡೆಮಿಯಿಂದ ಬೆಂಗಳೂರು ನಗರ ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.

ಅಶ್ವಥ್ ನಾರಾಯಣ್ ಅವರನ್ನು ಮೈಸೂರು ನಗರ ಸಿಸಿಬಿಯಿಂದ ಮೈಸೂರು ನಗರ ನರಸಿಂಹರಾಜ ಉಪವಿಭಾಗಕ್ಕೆ ಹಾಗೂ ಸಂದೇಶ್ ಕುಮಾರ್ ಅವರನ್ನು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ಉಪ ವಿಭಾಗದಿಂದ ಮೈಸೂರು ನಗರ ಸಿಸಿಬಿಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.