ಮನೆ ಅಪರಾಧ ನಿವೇಶನ ನೀಡುವುದಾಗಿ ಹಣ ಪಡೆದು ವಂಚನೆ: ಎಂ.ಎನ್ ದೊರೆಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯ

ನಿವೇಶನ ನೀಡುವುದಾಗಿ ಹಣ ಪಡೆದು ವಂಚನೆ: ಎಂ.ಎನ್ ದೊರೆಸ್ವಾಮಿ ವಿರುದ್ಧ ಕ್ರಮಕ್ಕೆ ಒತ್ತಾಯ

0

ಮೈಸೂರು(Mysuru): ನಿವೇಶನ ನೀಡುವುದಾಗಿ ಹಣ ಪಡೆದು ವಂಚಿಸಿರುವ ಎಸ್.ಜೆ.ಕೆ ಬಿಲ್ಡರ್ಸ್ ಡೆವಲಪರ್’ನ ವ್ಯವಸ್ಥಾಪಕ ಪಾಲುದಾರ ಎಂ.ಎನ್ ದೊರೆಸ್ವಾಮಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಎಂದು ವಕೀಲ ಗಂಗಾಧರ್ ಗೌಡ ಒತ್ತಾಯಿಸಿದ್ದಾರೆ.

ಮೈಸೂರಿನ‌ ಕಸಬಾ ಹೋಬಳಿಯ ಹಳೆ ಕೆಸರೆಯ 54/2, ,54/3, 54/4 ರಲ್ಲಿ ನಿವೇಶನ ನೀಡುವುದಾಗಿ ಹೇಳಿದ್ದ ದೊರೆಸ್ವಾಮಿ,  ಸುಮಾರು 600 ರಿಂದ 700ಜನರಿಗೆ ಸುಮಾರು 20 ಕೋಟಿಗೂ ಹೆಚ್ಚು ಹಣ ವಂಚನೆ ಮಾಡಿದ್ದಾರೆ.

ಹಣ ಪಡೆದು ಯಾವುದೇ  ನಿವೇಶನ ನೀಡದೆ ದೊರೆಸ್ವಾಮಿ ತಲೆ ತಪ್ಪಿಸಿಕೊಂಡಿದ್ದು, ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ  ಈ ಕುರಿತು ಗಮನ ಹರಿಸಿ ಹಣ ನೀಡಿ ವಂಚನೆಗೆ ಒಳಗಾಗಿರುವ ಗ್ರಾಹಕರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ಮನವಿ ಮಾಡಿದರು.