ಮನೆ ಸುದ್ದಿ ಜಾಲ ಸ್ನೇಹಿತನ ತಾಯಿ ಅಂತ್ಯಸಂಸ್ಕಾರ ವೇಳೆ ನೀರಿನಲ್ಲಿ ಮುಳುಗಿ ಯುವಕ ಸಾವು

ಸ್ನೇಹಿತನ ತಾಯಿ ಅಂತ್ಯಸಂಸ್ಕಾರ ವೇಳೆ ನೀರಿನಲ್ಲಿ ಮುಳುಗಿ ಯುವಕ ಸಾವು

0

ಸಿದ್ದಾಪುರ: ಸ್ನೇಹಿತನ ತಾಯಿಯ ಅಂತ್ಯ ಸಂಸ್ಕಾರ ಮುಗಿಸಿ, ಸಮೀಪದಲ್ಲೇ ಇದ್ದ ಕಾವೇರಿ ನದಿಯಲ್ಲಿ ಸ್ನಾನಕ್ಕೆ ತೆರಳಿದ ಯುವಕನೋರ್ವ ನೀರುಪಾಲಾದ ಘಟನೆ ಗುಹ್ಯ ಗ್ರಾಮದಲ್ಲಿ ನಡೆದಿದೆ.

Join Our Whatsapp Group

ಪಳ್ಳಕೆರೆಯ ನಿವಾಸಿ ರಾಜೇಂದ್ರ (33) ಎಂಬುವರೇ ನೀರು ಪಾಲಾದ ದುರ್ದೈವಿ.

ಗುಹ್ಯ ಗ್ರಾಮದ ಕಕ್ಕಟ್ಟುಕಾಡು ಬಳಿಯ ಖಾಸಗಿ ತೋಟದಲ್ಲಿ ವಾಸವಾಗಿದ್ದ ಮಂಜುನಾಥ್‌ ಎಂಬವರ ತಾಯಿ ನಿಧನರಾಗಿದ್ದು, ಮಂಜುನಾಥ್‌ ಸ್ನೇಹಿತ ಪಳ್ಳಕ್ಕರೆಯ ನಿವಾಸಿ ರಾಜೇಂದ್ರ ಅಂತ್ಯಸಂಸ್ಕಾರಕ್ಕೆ ತೆರೆಳಿದ್ದರು. ಅಂತ್ಯಸಂಸ್ಕಾರ ಬಳಿಕ ರಾಜೇಂದ್ರ ಹಾಗೂ ಸ್ನೇಹಿತರು ಸಮೀಪದ ಕಾವೇರಿ ಹೊಳೆಗೆ ಸ್ನಾನ ಮಾಡಲು ನೀರಿಗೆ ಇಳಿದಿದ್ದರು. ಈ ಸಂದರ್ಭದಲ್ಲಿ ಈಜುತ್ತಿದ್ದ ರಾಜೇಂದ್ರ ಆಯಾಸಗೊಂಡು ನೀರಿನಲ್ಲಿ ಮುಳುಗಿದ್ದಾರೆ.  ಇದನ್ನು ಗಮನಿಸಿದ ಸ್ನೇಹಿತರು ಆತನನ್ನು ರಕ್ಷಿಸಲು ಮುಂದಾಗಿದ್ದಾರೆ, ರಾಜೇಂದ್ರ ನೀರಿನಲ್ಲಿ ಮುಳುಗಿ ಕಣ್ಮರೆಯಾಗಿದ್ದಾರೆ.

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು, ಅಗ್ನಿಶಾಮಕದಳ ಸ್ಥಳೀಯರ ಸಹಾಯದೊಂದಿಗೆ ಮೃತದೇಹಕ್ಕಾಗಿ ಶೋಧ ಕಾರ್ಯ ನಡೆಸಿದ್ದರು ಪತ್ತೆಯಾಗಿರಲಿಲ್ಲ. ಭಾನುವಾರ ಬೆಳಗ್ಗೆ ನೀರಿನಲ್ಲಿ ಪತ್ತೆಯಾದ ಮೃತದೇಹವನ್ನು ಸ್ಥಳೀಯರು ಹೊರತೆಗೆದಿದ್ದಾರೆ. ನಂತರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಮೃತದೇಹವನ್ನು ಹಸ್ತಾಂತರಿಸಿದೆ.

ಸಿದ್ದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.