ಬೆಂಗಳೂರು: ನಾನು ದಿನಕ್ಕೆ 200 ರೂಪಾಯಿಯನ್ನಷ್ಟೇ ದುಡಿಯುತ್ತಿದ್ದು, ಪತ್ನಿ ಹಾಗೂ ಅಪ್ರಾಪ್ತ ಮಗಳಿಗೆ ಪ್ರತಿ ತಿಂಗಳು 3500 ರೂಪಾಯಿಯನ್ನು ಜೀವನಾಂಶವಾಗಿ ನೀಡಲು ಸಾಧ್ಯವಿಲ್ಲ ಎಂದು ವ್ಯಕ್ತಿಯೋರ್ವ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.
ಇದೇ ವೇಳೆ ಆದಾಯ ಕಡಿಮೆ ಎಂಬ ಕಾರಣವನ್ನು ಪರಿಗಣಿಸಲು ಒಪ್ಪದ ಹೈಕೋರ್ಟ್ ಅರ್ಜಿದಾರ ಪತಿ ಈಗ ಮಾಡುತ್ತಿರುವ ಕೆಲಸದಲ್ಲಿ ಸಂಪಾದನೆ ಕಡಿಮೆ ಇದ್ದರೆ ಬದಲಿ ಕೆಲಸ ಮಾಡಲಿ, ಆದರೆ ಪತ್ನಿ ಹಾಗೂ ಮಗಳಿಗೆ ಕನಿಷ್ಟ ಜೀವನಾಂಶ ನೀಡುವುದರಿಂದ ತಪ್ಪಿಸಿಕೊಳ್ಳಲಾಗುವುದು ಎಂದು ನ್ಯಾ.ಎಂ.ನಾಗಪ್ರಸನ್ನ ಅವರಿದ್ದ ಪೀಠ ಾದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರ ವ್ಯಕ್ತಿಯ ಪರ ವಕೀಲರು ಪೀಠಕ್ಕೆ ಮನವಿ ಮಾಡಿ, ಅರ್ಜಿದಾರರು ಗ್ಯಾರೇಜ್ ನಲ್ಲಿ ಮೆಕ್ಯಾನಿಕ್ ಕೆಲಸ ಮಾಡುತ್ತಾರೆ. ಅವರಿಗೆ ದಿನಕ್ಕೆ 150-200 ರೂಪಾಯಿಯನ್ನಷ್ಟೇ ಸಂಪಾದನೆ ಇರುವುದು. ಆದರೆ ವಿಚಾರಣಾ ನ್ಯಾಯಾಲಯ ಪತ್ನಿ ಹಾಗೂ ಪುತ್ರಿಗೆ ತಿಂಗಳೂ 3500 ರೂಪಾಯಿ ನೀಡುವಂತೆ ಆದೇಶಿಸಿದೆ. ತಿಂಗಳೀಗೆ 6 ಸಾವಿರ ಸಂಪಾದನೆ ಇರುವ ವ್ಯಕ್ತಿ 3500 ರೂ.ಗಳನ್ನು ಜೀವನಾಂಶವಾಗಿ ನೀಡಲು ಕಷ್ಟಸಾಧ್ಯ. ಹೀಗಾಗಿ ಜೀವನಾಂಶ ಮೊತ್ತವನ್ನು ಕಡಿಮೆ ಮಾಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ದಿನಕ್ಕೆ 200 ರೂಪಾಯಿ ಅಷ್ಟೇ ಸಂಪಾದನೆಯೇ ಎಂದು ಪ್ರಶ್ನಿಸಿತು. ವಕೀಲರು ಹೌದೆಂದರು. ಇದನ್ನು ಉಪ್ಪದ ಪೀಠ, ನೀವು ಹೇಳುವಷ್ಟೇ ಸಂಪಾದನೆ ಇರುವುದು ನಿಜವಾದರೆ ಬದಲಿ ಕೆಲಸ ಮಾಡಲು ಹೇಳಿ. ಈಗ ಜೀವನಾಂಶವಾಗಿ ಕೊಡಲು ಹೇಳಿರುವ ಮೊತ್ತವೇ ಕಡಿಮೆ ಇದೆ. ಅದಕ್ಕಿಂತ ಕಡಿಮೆ ಕೊಡುವಂತೆ ಹೇಳುವುದು ಹೇಗೆ ಎಂದು ಪೀಠ ಅರ್ಜಿದಾರರ ಮನವಿಗೆ ಬೇಸರ ವ್ಯಕ್ತಪಡಿಸಿತು. ಅಲ್ಲದೇ ಪ್ರತಿವಾದಿ ಮಹಿಳೆ ಹೆಚ್ಚಿಗೆ ಕೇಳಿ ಅರ್ಜಿ ಸಲ್ಲಿಸಿದ್ದರೆ ಅದನ್ನು ಪರಿಗಣಿಸುತ್ತಿದ್ದೆವು ಎಂದು ಅಭಿಪ್ರಾಯ ವ್ಯಕ್ತಪಡಿಸಿ ಅರ್ಜಿದಾರರ ಮನವಿಯನ್ನು ವಜಾಗೊಳಿಸಿತು.
ಪ್ರಕರಣದ ಹಿನ್ನಲೆ
ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿರುವ ಪತ್ನಿ ಹಾಗೂ ಮೂರೂವರೆ ವರ್ಷದ ಮಗಳು ಜೀವನಾಂಶ ಕೋರಿ ಸಿಆರ್ ಪಿಸಿ 125 ಅಡಿ ಕನಕಪುರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಪರಿಗಣಿಸಿದ್ದ ನ್ಯಾಯಾಲಯ ತಿಂಗಳಿಗೆ ಮೂರುವರೆ ಸಾವಿರ ಜೀವನಾಂಶ ನೀಡುವಂಥೆ ಆದೇಶಿಸಿದೆ. ಈ ಮೊತ್ತ ಹೆಚ್ಚಿನದ್ದಾಗಿದೆ ಎಂದು ಆಕ್ಷೇಪಿಸಿ ಪತಿರಾಯ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.