ಮಹಿಳೆಯರ ಒಳಉಡುಪುಗಳನ್ನು ಕದಿಯುವ ವಿಕೃತ ಕಾಮಿಯೊಬ್ಬ ಬೆಂಗಳೂರಿನಲ್ಲಿ ಇರುವ ಬಗ್ಗೆ ದೂರುಗಳು ಕೇಳಿ ಬಂದಿದೆ. ಒಂಟಿ ಮಹಿಳೆಯರಿರುವ ಮನೆಗಳೇ ಈತನ ಟಾರ್ಗೆಟ್.
ಬೆಂಗಳೂರು: ಉಮೇಶ್ ರೆಡ್ಡಿ ಎಂಬ ವಿಕೃತ ಕಾಮಿ ಮನೆಯ ಟರೇಸ್ ಮೇಲೆ ಒಣಗಲು ಹಾಕಿದ್ದ ಒಳ ಉಡುಪುಗಳನ್ನು ಕದಿಯುತ್ತಿದ್ದ. ಆತ ಸೆರೆ ಸಿಗುವುದರೊಂದಿಗೆ ಸಮಸ್ಯೆ ಬಗೆಹರಿಯಿತು ಎಂದು ಅಂದುಕೊಳ್ಳುತ್ತಿರುವಾಗಲೇ ಅಂತಹ ಮತ್ತೊಂದು ಪ್ರಕರಣ ಪೊಲೀಸರಿಗೆ ತಲೆ ನೋವಾಗಿ ಪರಿಣಮಿಸಿದೆ. ಮನೆಯೊಳಗೇ ನುಗ್ಗಿ ಮಹಿಳೆಯರ ಒಳ ಉಡುಪು ಕದಿಯುವ ಮತ್ತು ಅದರೊಂದಿಗೆ ಅಸಭ್ಯ ಕೃತ್ಯ ನಡೆಸುವ ಪಟಿಂಗನೊಬ್ಬ ಬೆಂಗಳೂರಿನಲ್ಲಿರುವ ಬಗ್ಗೆ ದೂರುಗಳು ಕೇಳಿಬಂದಿದ್ದು ಪೊಲೀಸರು ಈತನಿಗಾಗಿ ಶೋಧ ನಡೆಸುತ್ತಿದ್ದಾರೆ.
ನಗರದ ಲಗ್ಗೆರೆ ಸಮೀಪದ ವಿಧಾನಸೌಧ ಲೇಔಟ್ನಲ್ಲಿ ಇಂತಹ ವಿಕೃತಕಾಮಿ ಕಾಣಿಸಿಕೊಂಡಿದ್ದಾನೆ. ಉಮೇಶ್ ರೆಡ್ಡಿ ಎಂಬ ವಿಕೃತಕಾಮಿ ಸರಣಿ ಕೊಲೆಗಳನ್ನು ಸಹ ಮಾಡಿದ್ದ. ಈತನ ಬಗ್ಗೆ ಅಂತಹ ಯಾವುದೇ ದೂರುಗಳು ದಾಖಲಾಗಿಲ್ಲವಾಗಿದ್ದರೂ ಪೊಲೀಸರು ಇದನ್ನೊಂದು ಗಂಭೀರ ಪ್ರಕರಣ ಎಂದು ಪರಿಗಣಿಸಿದ್ದಾರೆ.
ಗೋವುಗಳ ಜತೆ ಅನೈಸರ್ಗಿಕ ಲೈಂಗಿಕ ಕ್ರಿಯೆ ನಡೆಸುತ್ತಿದ್ದ ಮಂಡ್ಯ ಮೂಲದ ವಿಕೃತ ಕಾಮುಕನ ಬಂಧನ
ಬಾಡಿಗೆ ಮನೆ ಕೇಳುವ ನೆಪದಲ್ಲಿ ಎಂಟ್ಕಿ !
ಗಂಡಸರು ಮನೆಯಲ್ಲಿ ಇಲ್ಲದಾಗ, ಅಥವಾ ಒಂಟಿ ಮಹಿಳೆಯರು ಇರುವ ಮನೆಗಳಿಗೆ ಆತ ತೆರಳುತ್ತಾನೆ. ಬಾಡಿಗೆ ಮನೆ ನೆಪದಲ್ಲಿ ಮಾತನಾಡಿಸುವ ಆತ ಮನೆ ನೋಡುವ ನೆಪದಲ್ಲಿ ಒಳಗೆ ಪ್ರವೇಶಿ ಬಹಳ ಚೆನ್ನಾಗಿ ಮಾತನಾಡಿಸುತ್ತಾನೆ. ಒಂದು ಬಾರಿ ಒಳಬಂದ ಆತ ವಾಶ್ ರೂಂಗೆ ತೆರಳಿ ಹೆಚ್ಚು ಸಮಯ ಕಳೆಯುತ್ತಾನೆ. ಅಷ್ಟು ಮಾತ್ರವಲ್ಲದೆ ಒಗೆಯುವ ಬಟ್ಟೆ ಹಾಕಿರುವ ಲಾಂಡ್ರಿ ಬ್ಯಾಗ್ ಗಳನ್ನು ಹುಡುಕಾಡುತ್ತಾನೆ. ಇಲ್ಲಾ ಬಟ್ಟೆ ಒಗೆಯುವ ಅಥವಾ ಒಣಗಿಸುವ ಸ್ಥಳಕ್ಕೆ ತೆರಳಿ ಉಡುಪುಗಳನ್ನು ಹುಡುಕುತ್ತಾನೆ. ಅದರಲ್ಲೂ ಮಹಿಳೆಯರ ಒಳಉಡುಪುಗಳು, ರವಿಕೆಗಳನ್ನು ಕೈಗೆತ್ತಿಕೊಂಡು ವಿಚಿತ್ರ ಆನಂದ ಅನುಭವಿಸುತ್ತಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈಗಾಗಲೇ ಈತ ನಡೆಸುವ ಅಸಭ್ಯ ಕೃತ್ಯದ ಬಗ್ಗೆ ನಿವಾಸಿಯೊಬ್ಬರು ವೀಡಿಯೋ ಮಾಡಿ ಕಳಿಸಿದ್ದಾರೆ. ಅದರಲ್ಲಿ ಆತ ಲಾಂಡ್ರಿ ಬಾಸ್ಕೆಟ್ ನಿಂದ ರವಿಕೆಯೊಂದನ್ನು ಎತ್ತಿಕೊಂಡು ಅದರೊಂದಿಗೆ ಅಸಭ್ಯವಾಗಿ ವರ್ತಿಸಿರುವುದು ವೀಡಿಯೋದಲ್ಲಿ ದಾಖಲಾಗಿದೆ.
ವಿಕೃತ ಕಾಮಿ ಉಮೇಶ್ ರೆಡ್ಡಿ ಗಲ್ಲು ಶಿಕ್ಷೆ ಕಾಯಂ: ಹೈಕೋರ್ಟ್ ಮಹತ್ವದ ತೀರ್ಪು
ಗಂಭೀರವಾಗಿ ಪರಿಗಣಿಸಿರುವ ಪೊಲೀಸರು
ಈತನ ಈ ವರ್ತನೆ ಹಿಂದೆ ಬೆಂಗಳೂರಿನ ಕುಖ್ಯಾತನಾಗಿದ್ದ ಸರಣಿ ಕೊಲೆಗಾರನ ಕೃತ್ಯವನ್ನೇ ಹೋಲುತ್ತಿರುವುದರಿಂದ ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಹೀಗಾಗಿ ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ. ಈವರೆಗೆ ಯಾವುದೇ ರೀತಿಯ ಗಂಭೀರ ಕೇಸು ದಾಖಲಾಗಿಲಿಲ್ಲವಾದರೂ ಪೊಲೀಸರು ಈ ವಿಚಾರವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ.
ಉಮೇಶ್ ರೆಡ್ಡಿ ಯಾರು?
ಉಮೇಶ್ ರೆಡ್ಡಿ 90ರ ದಶಕದಲ್ಲಿ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ್ದ ಕುಖ್ಯಾತ ಕೊಲೆಗಾರ ಮತ್ತು ಅತ್ಯಾಚಾರ ನಡೆಸಿದ್ದ ವಿಕೃತ ಕಾಮಿ. ಕರ್ನಾಟಕ, ಮಹಾರಾಷ್ಟ್ರ ಗುಜರಾತ್ ಗಳಲ್ಲಿ 20 ಮಹಿಳೆಯರ ಮೇಲೆ ಅತ್ಯಾಚಾರ, 18 ಮಹಿಳೆಯರ ಕೊಲೆಗಳನ್ನು ಮಾಡಿರುವುದನ್ನು ಒಪ್ಪಿಕೊಂಡಿದ್ದ ಎಷ್ಟೋ ಮಂದಿ ಮರ್ಯಾದೆಗೆ ಅಂಜಿ ಈತನ ವಿರುದ್ಧ ದೂರು ನೀಡಿರಲಿಲ್ಲ. ಕರ್ನಾಟಕ ಮಾತ್ರವಲ್ಲದೆ ಹಲವು ರಾಜ್ಯಗಳಿಗೆ ಈತ ಬೇಕಾಗಿದ್ದ. ಆತ ಎಸಗಿರುವ ಗಂಭೀರ ಅಪರಾಧಕ್ಕೆ ಸುಪ್ರೀಂ ಕೋರ್ಟ್ ಮರಣ ದಂಡನೆ ವಿಧಿಸಿದೆ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.