ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಇದೊಂದು ಕೈಲಾಸಂ ರವರ ಜೋಕು: ಒಬ್ಬ ಹುಡುಗ ಜಗುಲಿಯ ಮೇಲೆ ಕುಳಿತು ಅಳುತ್ತಾ ಇದ್ದ.

ಶ್ಯಾನುಭೋಗರು ಅವನನ್ನು ನೋಡಿ “ಯಾಕೋ ಮಗು ಅಳುತ್ತಾ ಇದ್ದೀಯಾ?” ಕೇಳಿದರು.

Join Our Whatsapp Group

“ನಮ್ಮಪ್ಪ ಸುತ್ತಿಗೇಲಿ ಗೋಡೆಗೆ ಮಳೆ ಹೊಡೆಯುತ್ತಾ ಇದ್ದಾಗ ಗುರಿ ತಪ್ಪಿ ಸುತ್ತಿಗೆ ಏಟು ಕೈಗೆ ಬಿದ್ದು ನೋವಾಗಿದೆ.” ಎಂದು ಅಳುತ್ತಾ ಹೇಳಿದ ಹುಡುಗ,

“ನಿಮ್ಮಪ್ಪ ಅವನ ಕೈಗೆ ಸುತ್ತಿಗೆಯಲ್ಲಿ ಹೊಡೆದು ಕೊಂಡರೆ ನೀನು ನಗುವುದನ್ನು ಬಿಟ್ಟು ಅಳುತ್ತಾ ಇದ್ದೀಯಲ್ಲಪ್ಪ?”

“ಹಾಗೆ ನಕ್ಕಿದ್ದಕ್ಕೆ ಅಪ್ಪ ನನಗೆ ಹೊಡೆದ. ಅದಕ್ಕೇ ಅಳುತ್ತಿರುವುದು!” ಹುಡುಗ ಹೇಳಿದ.

***

ಒಬ್ಬ ಕಾಲೇಜು ತರುಣಿ ಮತ್ತು ಒಬ್ಬ ಗ್ರಹಸ್ಥ ಮಹಿಳೆ ಇಬ್ಬರೂ ಬಸ್ಸಿಗಾಗಿ ಕಾದು ನಿಂತಿದ್ದರು. ಕಾಲೇಜು ತರುಣಿ ತನ್ನ ಸಿಗರೇಟ್‍ಕೇಸನ್ನು ತೆಗೆದು ತಾನು ಒಂದು ತೆಗೆದುಕೊಳ್ಳುತ್ತಾ ಪಕ್ಕದ ಹೆಂಗಸಿಗೂ ಸಿಗರೇಟ್‍ಕೇಸ್ ಹಿಡಿದು “ತೆಗೆದುಕೊಳ್ಳಿ ಬಸ್ ಬರೋದು ತಡ ಇದೆ’. ಅಂದಳು

“ಏನು ಹೆಂಗಸರು ಸಿಗರೇಟ್ ಸೇದುವುದೆ? ಅದರ ಬದಲಿಗೆ ದಾರಿಯಲ್ಲಿ ಹೋಗುವ ಯಾವುದಾದರೂ ಗಂಡಸನ್ನು ಮದುವೆ ಆಗಿಬಿಡುವುದು ಎಷ್ಟೋ ಮೇಲು” ಎಂದಳು ಆ ಗೃಹಸ್ಥೆ.

ತಕ್ಷಣವೇ ತರುಣಿ ಸಿಗರೇಟ್ ಕೇಸನ್ನು ಮುಚ್ಚುತ್ತಾ “ನೀವು ಹೇಳೋದೇನೋ ಸರಿಯಾಗಿಯೇ ಇದೆ. ಆದರೆ ಆಂತಹ ಗಂಡಸು ಬರುವವರೆಗೂ ಹೇಗೆ ಕಾಲ ಕಳೆಯುವುದು? ಅದಕ್ಕಾಗಿಯೇ ಈ ಸಿಗರೇಟು!”