ಮನೆ ಸ್ಥಳೀಯ ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: 10 ದಿನಗಳಾದರೂ ಪತ್ತೆಯಾಗದ ಶವ

ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವು: 10 ದಿನಗಳಾದರೂ ಪತ್ತೆಯಾಗದ ಶವ

0

ಮೈಸೂರು: ನೀರಿನಲ್ಲಿ ಮುಳುಗಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆ ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ತಲಕಾಡು ನಿಸರ್ಗದಾಮದಲ್ಲಿ ನಡೆದಿದೆ.

ಕಾರವಾರದ ಇಂಜಿನಿಯರಿಂಗ್ ವಿದ್ಯಾರ್ಥಿ ಅಮಿತ್ ಮೃತ ದುರ್ದೈವಿ.

ಆಗಸ್ಟ್ 15 ರ ಸ್ವತಂತ್ರ ದಿನಾಚರಣೆ ದಿನದಂದು ಘಟನೆ ನಡೆದಿದ್ದು, 10ದಿನಗಳಾದರೂ ಅಮಿತ್ ಶವ ದೊರೆತಿಲ್ಲ.

ಅಮಿತ್ ಶವ ಪತ್ತೆಗೆ ತಲಕಾಡಿಗೆ ಎನ್ ಡಿ ಆರ್ ಎಫ್  ತಂಡ ಆಗಮಿಸಿದ್ದು, ಮೈಸೂರು, ಕೊಡಗು, ಪೋಲೀಸರು ಹಾಗೂ ಎನ್ ಡಿ ಆರ್ ಎಫ್  ನ 60 ಜನರು ಅಮಿತ್ ಶವ ಹುಡುಕಾಟದಲ್ಲಿ ತೊಡಗಿದ್ದಾರೆ.

ಕೊಡಗು ಎಸ್ಪಿ ರಾಮರಾಜನ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

ಹತ್ತು ದಿನಗಳ ಬಳಿಕ ಶವ ಪತ್ತೆಗೆ ತೀವ್ರ ಶೋಧ ಕಾರ್ಯ ನಡೆಯುತ್ತಿದ್ದು, ವಿದ್ಯಾರ್ಥಿ ಅಮಿತ್ ಶವ ಇನ್ನೂ ಪತ್ತೆಯಾಗಿಲ್ಲ.

ಹಿಂದಿನ ಲೇಖನಕೇರಳ: ಕಂದಕಕ್ಕೆ ಉರುಳಿದ ಜೀಪ್- 9 ಮಂದಿ ಸಾವು
ಮುಂದಿನ ಲೇಖನಮೂವರು ಮಕ್ಕಳೊಂದಿಗೆ ಬಾವಿಗೆ ಹಾರಿ ತಾಯಿ ಆತ್ಮಹತ್ಯೆಗೆ ಯತ್ನ: ಮಕ್ಕಳು ಸಾವು