ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನ್ಯಾಯಧೀಶರು:  “ನಿನ್ನ ಆಜ್ಜನನ್ನು ನೀನು ಕತ್ತು ಹಿಸುಕಿ ಕೊಲೆಮಾಡಿದ ಆಪಾದನೆ ಇದೆ. ಏನು   ಹೇಳುತ್ತೀಯಾ?”

ಅಪರಾಧಿ: “ಮಹಾಸ್ಥಾಮೀ, ನಾನು ಖಂಡಿತವಾಗಿಯೂ ಕೊಲೆಮಾಡಲಿಲ್ಲ. ಮೊನ್ನೆ ನನ್ನ ಕೈಕಾಲುಗಳು ತುಂಬಾ ನೋಯುತ್ತಿವೆ. ಚೆನ್ನಾಗಿ ಒತ್ತು ಅಂದರು. ಅದಾದನಂತರ ಕುತ್ತಿಗೆ ತುಂಬಾ ನೋಯುತ್ತಿದೆ. ಅಲ್ಲಿಯೂ ಬಲವಾಗಿ ಒತ್ತು ನೋವು ಕಡಿಮೆ ಆಗಿ ಹಾಯ್ ಎನಿಸುತ್ತದೆ ಎಂದರು. ಒತ್ತುತ್ತಾ ಇದ್ದಾಗ ಇನ್ನೂ ಬಲವಾಗಿ ಒತ್ತು ಎನ್ನುತ್ತಿದ್ದರು. ಬಲವನ್ನೆಲ್ಲಾ ಬಿಟ್ಟು ಕತ್ತು ಹಿಸಿಕಿದೆ ಅಷ್ಟೆ!”

Join Our Whatsapp Group

***

ತುಂಬಿದ ಸಭೆಯಲ್ಲಿ ಉತ್ಸಾಹದಿಂದ ಭಾಷಣ ಮಾಡಲು ಎದ್ದುನಿಂತ ಭಾಷಣಕಾರರು

ಸಭೆಯನ್ನುದ್ದೇಶಿಸಿ ಪ್ರಶ್ನೆ ಕೇಳಿದರು: “ನಾನು ಎಷ್ಟು ಹೊತ್ತು ಭಾಷಣ ಮಾಡಬಹುದು ?”

ಸಭಿಕರೊಬ್ಬರು ನಿಂತು “ನೀವು ಎಷ್ಟು ಹೊತ್ತು ಬೇಕಾದರೂ ಭಾಷಣ ಮಾಡಬಹುದು. ಆದರೆ

ನಾವುಗಳು ಇಲ್ಲಿ ಕುಳಿತಿರುವುದು ಕೇವಲ ಮೂವತ್ತು ನಿಮಿಷಗಳು ಮಾತ್ರ!”

***

ರೋಗಿ: “ನೀವು ಕೊಟ್ಟಿರುವ ಔಷದ ಮಾತ್ರೆಗಳೆನ್ನು ಉಪಯೋಗಿಸಿದರೆ ನನ್ನ ಬೊಜ್ಜು ಕರಗಬಲ್ಲದೆ ವೈದ್ಯರೆ?”

ವೈದ್ಯ: “ಅದರ ಚಿಂತೆ ಬಿಡು. ಬೊಜ್ಜು ಕರಗಿಸುವ ಕೆಲಸವನ್ನು ನನ್ನ ಬಿಲ್ ಲೀಲಾಜಾಲವಾಗಿ ಮಾಡಬಲ್ಲದು!”