ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಗುಂಡನ ಪಂಚಿಂಗ್ ಉತ್ತರ ಕೇಳಿ ಗಡಿಬಿಯಾದ ಟೀಚರ್

ಟೀಚರ್ : ರಾಮನು ಮರದಿಂದ ಕೆಳಗೆ ಬಿದ್ದನು- ಇದು ಯಾವ ಕಾಲ?

Join Our Whatsapp Group

ಗುಂಡ : ರಾಮನಿಗೆ ಕೆಟ್ಟಕಾಲ *

ಟೀಚರ್ : ಅಕ್ಬರನು ಸಿಂಹಾಸನ ಏರಿದ ತಕ್ಷಣ ಏನು ಮಾಡಿದನು?

ಗುಂಡ : ಕುಳಿತುಕೊಂಡನು.

ಟೀಚರ್ : ವಾಸ್ಕೋಡಗಾಮನು ಭಾರತದಲ್ಲಿ ಮೊದಲ ಹೆಜ್ಜೆ ಇಟ್ಟ ತಕ್ಷಣ ಏನು ಮಾಡಿದನು?

ಗುಂಡ : ಎರಡನೇ ಹೆಜ್ಜೆ ಇಟ್ಟನು.

ಟೀಚರ್ ; ಸತ್ಯ ಹರಿಶ್ಚಂದ್ರನ ಕತೆಯಿಂದ ತಿಳಿಯಬೇಕಾದ ನೀತಿ ಏನು?

ಗುಂಡ : ಕಷ್ಟ ಬಂದಾಗ ಹೆಂಡತಿ ಮಕ್ಕಳನ್ನು ಮಾರಬಹುದು.

ಟೀಚರ್ : ರಾಮಾಯಣದಿಂದ ತಿಳಿಯಬೇಕಾದ ನೀತಿ ಏನು?

 ಗುಂಡ : ಹೆಂಡತಿಗೆ ಮಾತು ಕೊಡಬಾರದು, ಕೊಟ್ಟರೂ ಅದನ್ನು ವರ್ಷಗಳ ಕಾಲ ಕಾದಿಡಬಾರದು. *

ಟೀಚರ್ : ಗಣಪತಿಯ ಕತೆಯಿಂದ ತಿಳಿಯಬೇಕಾದ ನೀತಿ ಏನು?

ಗುಂಡ : ಸ್ನಾನದ ಕೋಣೆಗೆ ಬಾಗಿಲು ಇದುವುದು ಅತೀ ಅವಶ್ಯ.

*******

ಶೀಲಾ: “ಡಾಕ್ಟ್ರೆ ಕೂಡಲೇ ಬನ್ನಿ ನನ್ನ ಮಗನಿಗೆ ಕೆಮ್ಮು”

ಡಾ| ಶ್ರೀನಿವಾಸ: “ನೋಡಮ್ಮ ನಾನು ಪಶು ವೈದ್ಯ.”

ಶೀಲಾ: “ನನ್ನ ಮಗನಿಗೆ ಬಂದಿರುವುದು ನಾಯಿ ಕೆಮ್ಮು..”