ಮನೆ ರಾಜ್ಯ ತೀರ್ಥಹಳ್ಳಿ: ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ

ತೀರ್ಥಹಳ್ಳಿ: ಆಂಜನೇಯ ಸ್ವಾಮಿ ದೇಗುಲದಲ್ಲಿ ಕಳ್ಳತನ

0

ತೀರ್ಥಹಳ್ಳಿ: ಕುಡುಮಲ್ಲಿಗೆಯ ಚಿಡುವ ಆಂಜನೇಯ ಸ್ವಾಮಿ ದೇಗುಲದಲ್ಲಿ ಮಂಗಳವಾರ ತಡ ರಾತ್ರಿ ಕಳ್ಳರು ಭಾರೀ ಪ್ರಮಾಣದ ವಸ್ತುಗಳನ್ನು ಕಳ್ಳತನ ಮಾಡಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.

ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿ ಸುಮಾರು 50 ಸಾವಿರ ಇತ್ತು ಎನ್ನಲಾಗಿದೆ. ಹಾಗೆಯೇ ಬೆಳ್ಳಿ ವಸ್ತುಗಳು, ತಾಮ್ರದ ವಸ್ತುಗಳು, ಬೆಲೆ ಬಾಳುವ ವಸ್ತುಗಳನ್ನು ಕದ್ದಿದ್ದಾರೆ. ದೇವರ ವಿಗ್ರಹ ಬಿಟ್ಟು ಮತ್ತೆಲ್ಲ ವಸ್ತು ಕಳುವು ಮಾಡಲಾಗಿದೆ. ಜಾಗಂಟೆ ಕೂಡ ಕದ್ದು ಕಳ್ಳರು ಪರಾರಿಯಾಗಿದ್ದಾರೆ.

ಕಾರಿನಲ್ಲಿ ಬಂದು ಕಳ್ಳತನ ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ. ಒಟ್ಟು ಸುಮಾರು 2 ಲಕ್ಷ ಬೆಲೆ ಬಾಳುವ ವಸ್ತು ಕಳುವಾಗಿದೆ.

ಸ್ಥಳೀಯರು ಮಾಳೂರು ಪೊಲೀಸರಿಗೆ ಮಾಹಿತಿ ಮುಟ್ಟಿಸಿದ್ದು, ಸ್ಥಳಕ್ಕೆ ಭೇಟಿ ನೀಡಿದ್ದು,  ಬೆರಳಚ್ಚು ತಜ್ಞರನ್ನು ಕರೆಸಿ ಪರಿಶೀಲಿಸುತ್ತಿದ್ದಾರೆ.