ಮನೆ ಅಪರಾಧ ಜೆಡಿಎಸ್ ಮುಖಂಡನ ಅಪ್ಪುಗೌಡನ ಕೊಲೆಗೆ ಯತ್ನ: ನಾಲ್ವರ ಬಂಧನ

ಜೆಡಿಎಸ್ ಮುಖಂಡನ ಅಪ್ಪುಗೌಡನ ಕೊಲೆಗೆ ಯತ್ನ: ನಾಲ್ವರ ಬಂಧನ

0

ಮಂಡ್ಯ:  ಜೆಡಿಎಸ್ ಮುಖಂಡ ಅಪ್ಪುಗೌಡ ಕೊಲೆಗೆ ಯತ್ನಿಸಿದ ದುಷ್ಕರ್ಮಿಗಳನ್ನು ಮದ್ದೂರು ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ.

ಅಪ್ಪುಗೌಡ ಮೇಲೆ ಹಲ್ಲೆ ಮಾಡಿ ಟಾಟಾ ಸುಮೊನಲ್ಲಿ ಪರಾರಿಯಾಗುತ್ತಿದ್ದ ಆರೋಪಿಗಳನ್ನು ಹಿಂಬಾಲಿಸಿದ ಮದ್ದೂರು ಪೊಲೀಸರು ಕೃತ್ಯ ನಡೆದ ಸ್ಥಳದಿಂದ 25 ರಿಂದ 30 ಕಿಮೀ ಹಿಂಬಾಲಿಸಿದ್ದಾರೆ.

ಬಳಿಕ ಮಳವಳ್ಳಿ ತಾಲೂಕಿನ ಹಲಗೂರು ಠಾಣಾ ಪೊಲೀಸರ ಸಹಕಾರ ಪಡೆದಿದ್ದಾರೆ. ಹಲಗೂರು ಪೊಲೀಸರು ಟಾಟಾ ಸುಮೋವನ್ನು ಅಡ್ಡಗಟ್ಟಿ  4 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.

ಸದ್ಯ ಬಂಧಿತರನ್ನು ಮದ್ದೂರು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.