ಮನೆ ಹಾಸ್ಯ ಹಾಸ್ಯ

ಹಾಸ್ಯ

0

ನ್ಯಾಯಾಧೀಶರು : ಈ ದರೋಡೆನಾ ನೀನು ಒಬ್ಬನೇ ಮಾಡಿದೆಯಾ ?

ಕಳ್ಳ :ಹೌದು ಸ್ವಾಮಿ. ಈ ಕಾಲದಲ್ಲಿ ಯಾರನ್ನು ನಂಬುವ ಹಾಗಿಲ್ಲ. ಈ ಕೇಸು ಗೆದ್ದು ಕೊಟ್ಟರೆ ನಮ್ಮ ಲಾಯರ್ ನ ಪಾರ್ಟ್ನರ್ ಆಗಿ ತಗೋಬೇಕು ಅಂತ ಇದ್ದೀನಿ…

***

ವೈದ್ಯ : ಚಿಕಿತ್ಸೆಯಿಂದ ನಿಮ್ಮ ನೆನಪಿನ ಶಕ್ತಿ ಚೇತರಿಕೆಯಾಗುತ್ತಿದೆಯಲ್ವಾ,ಈಗ ಹಳೆಯದನ್ನು ನೆನಪಿಸಿಕೊಳ್ಳಿ ನೋಡೋಣ.

ರೋಗಿ : ಸ್ವಲ್ಪಮಟ್ಟಿಗೆ ಡಾಕ್ಟರ್. ನಾನು ಇತ್ತೀಚಿಗೆ ಏನು ಮರೆತಿದ್ದೇನೆ ಎಂದು ನೆನಪಿಗೆ ಬಂತು….

***

ಶ್ರೀಪತಿ : ಇವತ್ತು ನಿನ್ನಜೊತೆ ನನ್ನ ಲವ್ ಬಗ್ಗೆ ಮಾತಾಡುವ ಅಂತ ನಿರ್ಧಾರ ಮಾಡಿದ್ದೇನೆ.

ಚೂಡಾ : ಅದನ್ನ ನನ್ನ ಅಮ್ಮನತ್ರ ಮಾತಾಡಿ

ಶ್ರೀಪತಿ : ನಾನು ಲವ್ ಮಾಡ್ತಿರೋದು ನಿನ್ನನ್ನ. ನಿಮ್ಮನ್ನಲ್ಲ.

ಚೂಡಾ : ನಮ್ಮಮ್ಮ ನಮ್ಮಪ್ಪನ ಡೈವೋರ್ಸ್ ಮಾಡಿ ಬೇರೆ ಗಂಡು ಹುಡುಕುತ್ತಿದ್ದಾರೆ. ನೀವು ಅವಳಿಗೆ ಸರಿ ಹೋಗಬಹುದು ಅದಕ್ಕೆ.

***

ಹುಚ್ಚನೊಬ್ಬ ಪತ್ರ ಬರೆಯುತ್ತಿದ್ದ…

ಡಾಕ್ಟರ್:  ಯಾರಿಗೆ ಪತ್ರ?

ಹುಚ್ಚ : ನಿನಗೆ ಪತ್ರ ಬರೆಯುತ್ತಿದ್ದೇನೆ.

ಡಾಕ್ಟರ್ : ಏನಂತ ?

ಹುಚ್ಚ: ಅದು ಹೇಗೆ ನನಗೆ ಈಗ ತಿಳಿಯುವುದು. ನಾನು ಇದನ್ನು ಅಂಚೆಡಬ್ಬಿಗೆ ಹಾಕಿದ ನಂತರ ಅಂಚೆಯವನು ಇದನ್ನು ನನಗೆ ತಂದುಕೊಟ್ಟ ಮೇಲೆ ನಾನು ಓದಿದ ನಂತರ ಇದರಲ್ಲಿರುವ ವಿಷಯ ನನಗೆ ತಿಳಿಯಬೇಕಷ್ಟೇ…..