ಮನೆ ದೇವರ ನಾಮ ಹೇಳುವೆ ಕಥೆ ಹೇಳುವೆ

ಹೇಳುವೆ ಕಥೆ ಹೇಳುವೆ

0

ಹೇಳುವೆ ಕಥೆ ಹೇಳುವೆ ಕೇಳಿರಿ ಕಥೆ ಹೇಳುವೆ ||

 ಗೌರಿ ಪುತ್ರ ವಿನಾಯಕನಿಗೆ, ಆನೆ ಮುಖದ ಬಂದ ಕಥೆಯ || ಹೇಳುವೆ ||

ಒಂದು ದಿನ ಪಾರ್ವತಿಯು ಸ್ಥಾನಗೃಹಕೆ ಹೊರಟಳು,

ಮಣ್ಣಿನಿಂದ ಮೂರ್ತಿಯ ಮಾಡಿ ಜೀವ ಅದಕ್ಕೆ ಇಟ್ಟಳು ||

ಅಮ್ಮ ನಿನ್ನ ಆಜ್ಙೆಯೇನು ಎಂದು ಕೇಳಿ ಕಂದನು || 

ಕಾವಲಿರು ಎಂದಳು ಗೌರಿ ಒಲವಿನಿಂದ|| ||ಹೇಳುವೆ||

ಕಂದ ಕಾವಲಿರುವ ವೇಳೆ ಶಿವನು ಅಲ್ಲಿಗೆ ಬಂದ|

ಶಿವನು ಯಾರೆಂದರಿಯದೆ ನಿಲ್ಲಿಸಿದನು ಕಂದಾ |

ಒಳಗೆ ಬಿಡೆನು ಇಲ್ಲೆ ನಿಲ್ಲಿ ಎಂದು ಕಂದ ಎನಲು |

ಅರಗೆ ಉಕ್ಕಿಬಂತು ಆಗ ಕೋಪದ ಹೊನಲು | ಕೋಪದ ಹೊನಲು |

ಕೋಪದಿಂದ ಶೂಲತೆಗೆದು ನಿಂತನು ತ್ರಿಪುರಾರಿ| 

ಕಂದನ ತಲೆ ಕತ್ತರಿಸಿದ ಕಾಮ ಸಂಹಾರಿ |

 ಶಬ್ದ ಕೇಳಿ ಹೊಳಗಿನಿಂದ ಓಡಿ ಬಂದಳು ಗೌರಿ |

ಸತ್ತ ಮಗನ ಕಂಡು ಅತ್ತು ಗೋಳಾಡಿದಳು ನಾರಿ ||

ಸತ್ತ ಹುಡುಗ ತನ್ನ ಮಗನು ಎಂದು ಅರಿತ ನೊಂದ ಶಿವನು,

ಒಂದು ತಲೆಯ ಅರಿಸಿ ತನ್ನಿ ಎಂದು ಅಜ್ಙೆ ತಂದನು ||

ಅರಸಿ ಹೊರಟರು ಗಣಗಳು ದಿಕ್ಕು ದಿಕ್ಕಿಗೆ |

ಆನೆ ಒಂದು ಮಲಗಿತ್ತು ಉತ್ತರ ದಿಕ್ಕಿಗೆ |

ಆನೆ ತಲೆ ಕತ್ತರಿಸಿ ಶಿವನ ಬಳಿಗೆ ತಂದರು |

ಅದನ್ನು ಮಗನ ದೇಹಕ್ಕಿಟ್ಟು ಜೀವ ತಂದನು ದೇವನು |

ಜೀವ ತುಂಬಿದ ಕಂದ ತಂದೆಗೆ ವಂದನೆ ಗೈದನು |

ಸಂತಸದೇ ಮಗನ ತಬ್ಬಿ ಅವಗೆ ವರವ ಇಟ್ಟನು ||

ಇಂದಿನಿಂದ ಮೊದಲ ಪೂಜೆ ಎಂದು ನಿನಗೆ ಎಂದನು |

 ಗಣಗಳಿಗೆ ನಾಯಕ ನೀ ಎಂದು ಶಿವನು ನುಡಿದನು |

 ಅಂದಿನಿಂದ ಕಂದನಾದ ದೈವ ಗಣನಾಯಕ |

ಭಕ್ತರ ವಿಘ್ನಗಳನ್ನು ಅರಿಸುವ ವಿನಾಯಕ || 2 ||