ಮನೆ ರಾಜ್ಯ ಸರಗೂರು: ಕಾಡಾನೆ ದಾಳಿಯಿಂದ ರೈತ ಸಾವು

ಸರಗೂರು: ಕಾಡಾನೆ ದಾಳಿಯಿಂದ ರೈತ ಸಾವು

0

ಸರಗೂರು: ಕಾಡಾನೆ ದಾಳಿಯಿಂದ ರೈತನೋರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಸರಗೂರು ತಾಲ್ಲೂಕಿನ ಎಂ.ಸಿ ತಳಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.

ಚನ್ನಗುಂಡಿ ಗ್ರಾಮದ ಮಹೇಂದ್ರ 35 ವರ್ಷ ಕಾಡಾನೆ ದಾಳಿಗೆ ಬಲಿಯಾದ ರೈತ.

ಮಹೇಂದ್ರ ಎಂದಿನಂತೆ ಬೆಳಿಗ್ಗೆ ಸುಮಾರು 7 ಸಮಯಕ್ಕೆ ಜಮೀನಲ್ಲಿ ಹತ್ತಿ ಬಿಡಿಸಲು ಅಣ್ಣನ ಜೊತೆಯಲ್ಲಿ ಜಮೀನಿಗೆ ಬಂದಿದ್ದಾರೆ. ಅವರು ಕೆಲಸ ಮಾಡುವ ಸಮಯದಲ್ಲಿ ಕಾಡಾನೆ ದಾಳಿ ಮಾಡಿದೆ. ಮಹೇಂದ್ರ ಹಾಗೂ ಅವರ ಸಹೋದರ ಗಾಬರಿಗೊಂಡು ಜಮೀನಿನಿಂದ ಆನೆಯಿಂದ ತಪ್ಪಿಸಿ ಕೊಳ್ಳಲು ಪ್ರಯತ್ನ ಮಾಡಿದ್ದಾರೆ. ಅದರೆ ಮಹೇಂದ್ರ ಅವರನ್ನು ಅರ್ಧ ಕಿಲೋ ಮೀಟರ್ ದೂರ ಓಡಿಸಿಕೊಂಡು ಹೋಗಿ ತುಳಿದು ಹಾಕುತ್ತಿದೆ.

ಎಸಿಎಫ್ ಪರಮೇಶ್, ಸರಗೂರು ವೃತ್ತ ನಿರೀಕ್ಷಕ ಎಂ ಲಕ್ಷ್ಮಿಕಾಂತ್, ಸಬ್ ಇನ್ಸ್ಪೆಕ್ಟರ್ ನಂದೀಶ್ ಕುಮಾರ್ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.