ಮನೆ ಅಪರಾಧ ನಂಜನಗೂಡು: ದಿನಸಿ ಅಂಗಡಿಯಲ್ಲಿ ಕಳವು

ನಂಜನಗೂಡು: ದಿನಸಿ ಅಂಗಡಿಯಲ್ಲಿ ಕಳವು

0
ಸಾಂದರ್ಭಿಕ ಚಿತ್ರ

ನಂಜನಗೂಡು : ನಗರದ ಸಿಟಿಜನ್ ಶಾಲೆಯ ರಸ್ತೆಯ ಗೌತಮ ಬಡಾವಣೆಯಲ್ಲಿನ ದಿನಸಿ ಅಂಗಡಿಯೊಂದಕ್ಕೆ ಕಳ್ಳರು ನುಗ್ಗಿ, ಲಕ್ಷಾಂತರ ಮೌಲ್ಯದ ವಸ್ತುಗಳನ್ನು ದೋಚಿರುವ ಘಟನೆ ನಡೆದಿದೆ.

ಮಂಗಳವಾರ ರಾತ್ರಿ ಇಲ್ಲಿನ ಭೋಗೇಶ್ವರ ಸ್ಟೋರ್ಸ್ ಮಾಲೀಕ ನಾಗರಾಜು ಅಂಗಡಿ ಬಾಗಿಲು ಹಾಕಿಕೊಂಡು ಹೋದ ನಂತರ ಈ ಘಟನೆ ನಡೆದಿದೆ.

ಅಂಗಡಿಯ ಕಬ್ಬಿಣದ ಶಟರ್ ಅನ್ನು ಮೀಟಿದ ಕಳ್ಳರು ಅಂಗಡಿಯೊಳಗಿದ್ದ ಹತ್ತಾರು ಮೂಟೆ ಅಕ್ಕಿ, ಬೇಳೆ, ಸಕ್ಕರೆ ಸೇರಿದಂತೆ ಲಕ್ಷಾಂತರ ಮೌಲ್ಯದ ಪದಾರ್ಥಗಳನ್ನು ಕಳ್ಳತನ ಮಾಡಿದ್ದು, ಎಲ್ಲವನ್ನು ಸಾಗಿಸುವ ಯಾವುದೋ ವಾಹನ ಬಳಕೆ ಮಾಡಲಾಗಿದೆ ಎಂದು ತಿಳಿದುಬಂದಿದೆ. ನಂಜನಗೂಡು ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.