ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : ಕಿಟ್ಟು ಒಂದು ವಿಚಾರ ಗೊತ್ತಾಯ್ತಾ?

ಕಿಟ್ಟು : ಏನು ಸಮಾಚಾರ ಹೇಳು?

ರಾಜು : ಗುಂಡಂಗೆ ಒಂದು ಗಂಡು ಮಗು ಆಯಿತು. ಮಗುವಿನ ನಕ್ಷತ್ರ ಹೇಗೆ ಅಂತ ಭವಿಷ್ಯ ಕೇಳಿದರಂತೆ. ಮಗು ಯಾರ ಹೆಸರು ಹಿಡಿದು ಕೂಗುತ್ತೆ ಅವರು ಸಾಯ್ತಾರೆ ಅಂತ ಹೇಳಿದರಂತೆ.

ಕಿಟ್ಟು : ಆಮೇಲೆ ?

ರಾಜು : ಮಗು ಅಜ್ಜಿ ಅಂತ ಕೂಗ್ತಂತೆ, ಅಜ್ಜಿ ನೆಗೆದು ಬಿದ್ಲಂತೆ, ತಾತ ಅಂತ ಕೂಗ್ತಂತೆ ತಾತ ನೆಗೆದು ಬಿದ್ರಂತೆ, ಅಪ್ಪ ಅಂತ ಕೂಗ್ತಂತೆ ಪಕ್ಕದ ಮನೆ ಮಂಜ ನೆಗದು ಬಿದ್ನಂತೆ.

****

ಶಿಕ್ಷಕ :  ಅಲ್ವೋ ರಾಜು, ಅವತ್ತು ತಲೆನೋವು ಅಂತ ಒಂದು ದಿನ ರಜಾ ಪಡೆದಿದ್ದೆ. ಇವತ್ತು ಕಾಲು ನೋವು ಅಂತ ಎರಡು ದಿನ ರಜೆ ತಗೊಂಡಿದ್ದೀಯಲ್ಲ ಏಕೆ ?

ರಾಜು : ಏನ್ ಮಾಡ್ಲಿ ಸರ್, ತಲೆ ಇರೋದು ಒಂದೇ, ಆದರೆ ಕಾಲು ಎರಡಿವೆಯಲ್ಲಾ

****

ರಾಜು : ಕಿಟ್ಟು ಒಂದು ವಿಚಾರ ಹೇಳ್ತೀನಿ, ಅದಕ್ಕೆ ಸರಿಯಾಗಿ ಉತ್ತರ ಹೇಳ್ತಿಯಾ ?

ಕಿಟ್ಟು : ಆಯ್ತು ಅದೇನು ಕೇಳು ?

ರಾಜು : ಒಂದು ನಾಯಿಗೆ ಒಂದು ಹೆಣ್ಣು ಬೆಕ್ಕನ್ನು ಪ್ರೀತಿಸಿತು ಆದರೆ ನಾಯಿ ಮನೆಯವರು ಬೆಕ್ಕನ್ನು ಮದುವೆ ಮಾಡಿಕೊಳ್ಳಲು ತಿರಸ್ಕರಿಸಿದ್ದರು. ಏಕೆ ?

ಕಿಟ್ಟು : ನಂಗೊತ್ತಿಲ್ಲಪ್ಪ.

ರಾಜು : ಕಾರಣ ಏನು ಗೊತ್ತೇ ? ಹುಡುಗಿಗೆ ಮೀಸೆ ಇದೆ ಅಂತ.