ಮನೆ ಅಪರಾಧ ಪಂಜಾಬ್​​: ಬಸ್‌ಗಳಿಗೆ ಬೆಂಕಿ, ಓರ್ವ ಸಜೀವ ದಹನ

ಪಂಜಾಬ್​​: ಬಸ್‌ಗಳಿಗೆ ಬೆಂಕಿ, ಓರ್ವ ಸಜೀವ ದಹನ

0

ಬಠಿಂಡಾ(Batinda) (ಪಂಜಾಬ್): ಬಸ್ ನಿಲ್ದಾಣದಲ್ಲಿ ನಿಂತಿದ್ದ ಬಸ್​ಗಳಿಗೆ ಏಕಾಏಕಿ ಬೆಂಕಿ ಹೊತ್ತಿಕೊಂಡ ಪರಿಣಾಮ ಓರ್ವ ಸಜೀವ ದಹನಗೊಂಡಿರುವ ಭೀಕರ ಘಟನೆ ನಡೆದಿದೆ.

ನಿನ್ನೆ ರಾತ್ರಿ ಭಗ್ತಾ ಭಾಯ್ ಕಾ ಬಸ್ ನಿಲ್ದಾಣದಲ್ಲಿ ಮೂರು ಬಸ್​​​ಗಳು ಬೆಂಕಿಗೆ ಆಹುತಿಯಾಗಿದ್ದು, ಒಬ್ಬರು ಸಾವನ್ನಪ್ಪಿದ್ದಾರೆ. ಅಗ್ನಿ ಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಬೆಂಕಿ ಹೊತ್ತಿಕೊಂಡ ಮೂರು ಬಸ್‌ಗಳಲ್ಲಿ ಎರಡು ಹೊಸ ಬಸ್‌ಗಳಾಗಿದ್ದು, ಸಂಚಾರಕ್ಕೆ ಸಿದ್ಧವಾಗಿದ್ದವು. ಆದರೆ, ಈ ದುರ್ಘಟನೆ ಸಂಭವಿಸಿ, ಬಸ್​​​ಗಳು ಅಗ್ನಿಗಾಹುತಿಯಾಗಿವೆ.

ಮೃತರು ಬಸ್ ಕಂಡಕ್ಟರ್ ಆಗಿರಬಹುದು ಎನ್ನಲಾಗುತ್ತಿದೆ. ಅಗ್ನಿ ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಪೊಲೀಸರು ಸ್ಥಳಕ್ಕಾಗಮಿಸಿ ಶವವನ್ನು ವಶಕ್ಕೆ ಪಡೆದು, ಪರಿಶೀಲನೆ ಕೈಗೊಂಡಿದ್ದಾರೆ.