ಮನೆ ಅಪರಾಧ ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿದ ಟಿಪ್ಪರ್: ಚಾಲಕ ಸಾವು

ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಉರುಳಿದ ಟಿಪ್ಪರ್: ಚಾಲಕ ಸಾವು

0

ಕೊಪ್ಪಳ: ತಾಲೂಕಿನ ಮುನಿರಾಬಾದ್ ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಟಿಪ್ಪರ್ ಒಂದು ತುಂಗಭದ್ರಾ ನದಿಯ ಸೇತುವೆಗೆ ಡಿಕ್ಕಿ ಹೊಡೆದು ಬಳಿಕ ನದಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಮೃತಪಟ್ಟ ಘಟನೆ ನಡೆದಿದೆ.

ಮೈನ್ಸ್ ತುಂಬಿದ್ದ ಟಿಪ್ಪರ್ ರಾಷ್ಟ್ರೀಯ ಹೆದ್ದಾರಿಯ ತುಂಗಭದ್ರಾ ಸೇತುವೆಯ ರಕ್ಷಣಾ ಗೋಡೆಗೆ ಗುದ್ದಿ ಬಳಿಕ ನದಿಗೆ ಉರುಳಿದೆ.

ಲಾರಿ ಚಾಲಕ ಅತಿವೇಗವಾಗಿ ಬಂದಿದ್ದರಿಂದ ಘಟನೆ ನಡೆದಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತಪಟ್ಟ ಚಾಲಕ ಬಿಹಾರ್ ಮೂಲದವರು ಎಂದು ತಿಳಿದು ಬಂದಿದೆ ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.