ಮನೆ ಜ್ಯೋತಿಷ್ಯ ಲೋಕಸಭಾ ಚುನಾವಣೆ: ಎನ್ ಡಿಎ 407 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ...

ಲೋಕಸಭಾ ಚುನಾವಣೆ: ಎನ್ ಡಿಎ 407 ಸ್ಥಾನಗಳನ್ನು ಗೆಲ್ಲಲಿದೆ ಎಂದು ಭವಿಷ್ಯ ನುಡಿದ ಖ್ಯಾತ ಜ್ಯೋತಿಷಿ ವಿಷ್ಣು ಕೊಠಾರಿ

0

ಬೆಂಗಳೂರು: ಲೋಕಸಭಾ ಚುನಾವಣೆ ಮತ ಎಣಿಕೆಗೆ ದಿನಗಣನೆ ಆರಂಭವಾಗಿದ್ದು, ಯಾವ ಪಕ್ಷ ಗೆಲ್ಲಲಿದೆ ಎಂಬ ಲೆಕ್ಕಾಚಾರ ಈಗಾಗಲೇ ಆರಂಭವಾಗಿದೆ. ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಾಗಿದೆ.

Join Our Whatsapp Group

ಈ ಬಾರಿ ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದು, ಕಳೆದ ಬಾರಿಯಂತೆಯೇ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಗೆಲ್ಲುವ ಕಸರತ್ತು ನಡೆಸಿದೆ. ಈ ಮಧ್ಯೆ ಕಾಂಗ್ರೆಸ್ ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸದಲ್ಲಿದೆ.

ಕಳೆದ 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ 25 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, ಕಾಂಗ್ರೆಸ್ ಒಂದೇ ಒಂದು ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದ ಜೆಡಿಎಸ್ ಕೂಡ ಒಂದೇ ಒಂದು ಸ್ಥಾನ ಗೆದ್ದುಕೊಂಡಿತ್ತು. ಪಕ್ಷೇತರ ಅಭ್ಯರ್ಥಿಯೊಬ್ಬರು ಗೆಲುವು ಸಾಧಿಸಿದ್ದರು.

ಇದರ ಬೆನ್ನಲ್ಲೆ ಖ್ಯಾತ ಜ್ಯೋತಿಷಿ ವಿಷ್ಣು ಕೊಠಾರಿ ಅವರು ಈ ಬಾರಿಯ ಚುನಾವಣೆಯಲ್ಲಿ ಎನ್ ಡಿಎ 407 ಸ್ಥಾನಗಳನ್ನು ಗೆದ್ದು, ಗದ್ದುಗೆ ಏರಲಿದೆ ಎಂದು ಭವಿಷ್ಯ ನುಡಿದಿದ್ದಾರೆ.

ಅದರಲ್ಲಿಯೂ ಕರ್ನಾಟಕದ ಒಟ್ಟು 28 ಕ್ಷೇತ್ರಗಳಲ್ಲಿ ಸುಮಾರು 25 ಕ್ಷೇತ್ರಗಳನ್ನು ಎನ್ ಡಿಎ ಗೆದ್ದು ಬೀಗಲಿದೆ ಎಂದು  ಹೇಳಲಾಗಿದೆ.

ಉಳಿದಂತೆ ಉತ್ತರ ಪ್ರದೇಶದಲ್ಲಿ 74, ಮಹರಾಷ್ಟ್ರ-39, ಪಶ್ಚಿಮ ಬಂಗಾಳ-24 ಕ್ಕೂ ಅಧಿಕ ಕ್ಷೇತ್ರಗಳು, ಬಿಹಾರ- 36, ತಮಿಳುನಾಡು-8, ಮಧ್ಯ ಪ್ರದೇಶ-29, ಗುಜರಾತ್- 26, ರಾಜಸ್ಥಾನ-23 ಕ್ಕೂ ಅಧಿಕ, ಆಂದ್ರ ಪ್ರದೇಶ- 19, ಒರಿಸ್ಸಾ-14, ಕೇರಳ-3, ತೆಲಂಗಾಣ-7 ಕ್ಕೂ ಅಧಿಕ, ಅಸ್ಸಾಂ-10, ಪಂಜಾಬ್-5, ಛತ್ತಿಸ್ ಘಢ-10, ಉತ್ತರಖಾಂಡ್-5, ಹಿಮಾಚಲ್-4, ಮಣಿಪುರ-1, ಗೋವಾ-2, ತ್ರಿಪುರ-2, ಮೇಘಾಲಯ-1 ಹಾಗೂ ಅರುಣಾಚಲ ಪ್ರದೇಶದಲ್ಲಿ 2 ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಎನ್ ಡಿ ಎ ಸರ್ಕಾರವನ್ನು ರಚಿಸಲಿದೆ ಎಂದು ಜ್ಯೋತಿಷಿ ವಿಷ್ಣು ಕೊಠಾರಿ ಮತ್ತು ಅವರ ತಂಡ ಭವಿಷ್ಯ ನುಡಿದಿದ್ದಾರೆ.

ಜೂನ್ 4 ರಂದು ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರ ಬೀಳಲಿದೆ.