ಮನೆ ಅಪರಾಧ ರಾಮನಗರ: ವಿಐಪಿ ಗೇಟ್ ನಲ್ಲಿ ಬಂದ ಭಕ್ತನ ಮೇಲೆ ಸೆಕ್ಯೂರಿಟಿ ಗಾರ್ಡ್ ಹಲ್ಲೆ

ರಾಮನಗರ: ವಿಐಪಿ ಗೇಟ್ ನಲ್ಲಿ ಬಂದ ಭಕ್ತನ ಮೇಲೆ ಸೆಕ್ಯೂರಿಟಿ ಗಾರ್ಡ್ ಹಲ್ಲೆ

0

ರಾಮನಗರ: ವಿಐಪಿ ಗೇಟ್ ನಲ್ಲಿ ಬಂದ ಭಕ್ತನ ಮೇಲೆ ಸೆಕ್ಯೂರಿಟಿ ಗಾರ್ಡ್ ಒಬ್ಬ ಹಲ್ಲೆ ಮಾಡಿದ ಘಟನೆ ಕನಕಪುರ ತಾಲೂಕಿನ ಕಬ್ಬಾಳು ದೇವಾಲಯದಲ್ಲಿ ನಡೆದಿದೆ.

Join Our Whatsapp Group

ಮಹೇಶ್ ಎಂಬವರು ಹಲ್ಲೆಗೊಳಗಾದ ಭಕ್ತ. ಸೆಕ್ಯೂರಿಟಿ ಗಾರ್ಡ್ ನಾಗರಾಜ್ ಎಂಬಾತ ಹಲ್ಲೆ ನಡೆಸಿದ್ದಾನೆ ಎಂದು ವರದಿಯಾಗಿದೆ.

ವಿಐಪಿ ಗೇಟ್ ನಲ್ಲಿ ಬಂದ ಭಕ್ತರ ಮೇಲೆ ಸೆಕ್ಯೂರಿಟಿ ನಾಗರಾಜ್ ಹಲ್ಲೆ ಮಾಡಿದ್ದಾನೆ. ಬೀಗದ ಕೀನಲ್ಲಿ ಬುರುಡೆಗೆ ಹೊಡೆದಿದ್ದಾನೆ. ಹಲ್ಲೆಯ ಕಾರಣದಿಂದ ಮಹೇಶ್ ತಲೆ ಬರುಡೆಯಲ್ಲಿ ರಕ್ತ ಚಿಮ್ಮಿದೆ. ರಕ್ತ ಕಂಡು ಭಕ್ತರು ಗಾಬರಿಯಾಗಿದ್ದಾರೆ.

ಹಲ್ಲೆ ಮಾಡಿದ ಗಾರ್ಡ್ ವಿರುದ್ದ ಕ್ರಮ ಆಗಬೇಕು, ನನಗೆ ನ್ಯಾಯ ಸಿಗಬೇಕು ಎಂದು ದೇವಾಲಯದ ಒಳಗೆ ಮಹೇಶ್ ಕುಳಿತಿದ್ದಾರೆ. ಸ್ಥಳಕ್ಕೆ ದೇವಾಲಯದ ಆಡಳಿತ ಮಂಡಳಿ, ಇಓ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ದೇವಾಲಯದ ಇಓ ಸೆಕ್ಯೂರಿಟಿ ಮೇಲೆ‌ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸಾತನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.