ಮನೆ ಅಪರಾಧ ಭ್ರೂಣಹತ್ಯೆ: ಮತ್ತೊಬ್ಬ ಆರೋಪಿ ಬಂಧನ

ಭ್ರೂಣಹತ್ಯೆ: ಮತ್ತೊಬ್ಬ ಆರೋಪಿ ಬಂಧನ

0

ಪಾಂಡವಪುರ:ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಿಂಬದಿಯ ವಸತಿ ಗೃಹದಲ್ಲಿ ಇತ್ತೀಚೆಗೆ ನಡೆದಿದ್ದ ಭ್ರೂಣ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಜು.೧೧ ರಂದು ಮತ್ತೊಬ್ಬ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

Join Our Whatsapp Group


ತಾಲೂಕಿನ ಹಿರೇಮರಳಿ ಗ್ರಾಮದ ಸಿಂಗೇಗೌಡರ ಮಗ ಉಮೇಶ್ ಬಂಧಿತ ಆರೋಪಿ.ಪ್ರಕರಣದ ಮತ್ತೊಬ್ಬ ಪ್ರಮುಖ ಆರೋಪಿ ಅಭಿಲಾಷ್ ಎಂಬಾತನ ಸೋದರ ಮಾವನಾಗಿರುವ ಈತ ಭ್ರೂಣ ಹತ್ಯೆಗೆ ಒಳಗಾಗುವವನ್ನು ಗುರುತಿಸುತ್ತಿದ್ದ ಎನ್ನಲಾಗಿದ್ದು, ಅಬಾಷನ್ ಬಯಸುವ ಮಹಿಳೆಯರನ್ನು ಶೃತಿ ಮತ್ತು ಆಶಾ (ಭ್ರೂಣ ಹತ್ಯೆ ಪ್ರಕರಣದಲ್ಲಿ ಈಗಗಲೇ ಜೈಲು ಸೇರಿರುವ ಆರೋಪಿಗಳು) ಅವರಿಗೆ ಪರಿಚಯಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಇತ್ತೀಚೆಗೆ ದೇವೇಗೌಡನಕೊಪ್ಪಲು ಗ್ರಾಮದ ಮಹಿಳೆಯೊಬ್ಬರಿಗೆ ತಮ್ಮ ಮನೆಯ ಕೊಠಡಿಯಲ್ಲಿ ಭ್ರೂಣ ಹತ್ಯೆ ನಡೆಸಲು ಅವಕಾಶ ಮಾಡಿಕೊಟ್ಟಿದ್ದು,ಪ್ರಕರಣದ ಜಾಡು ಹಿಡಿದು ತನಿಖೆ ನಡೆಸುತ್ತಿದ್ದ ಸಬ್‌ಇನ್ಸ್ಪೆಕ್ಟರ್ ಆರ್.ಬಿ.ಉಮೇಶ್ ಅವರ ತಂಡ ಆರೋಪಿಯನ್ನು ಅವರ ಸ್ವತಃ ಮನೆಯಲ್ಲೇ ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿ ಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.