ಮನೆ ಅಪರಾಧ ಮಂಗಳೂರು: ಕಡಿದು ಬಿದ್ದ ವಿದ್ಯುತ್ ತಂತಿ ತಗುಲಿ ಯುವತಿ ಸಾವು

ಮಂಗಳೂರು: ಕಡಿದು ಬಿದ್ದ ವಿದ್ಯುತ್ ತಂತಿ ತಗುಲಿ ಯುವತಿ ಸಾವು

0

ಬಜ್ಪೆ/ಮಂಗಳೂರು: ಕಡಿದು ಬಿದ್ದ ವಿದ್ಯುತ್‌ ತಂತಿ ತಗುಲಿ ಯುವತಿಯೊಬ್ಬರು ಸಾವನ್ನಪ್ಪಿದ ಘಟನೆ ಶುಕ್ರವಾರ ಬೆಳಗ್ಗೆ ಮಂಗಳೂರಿನ ಬಜ್ಪೆ ಸಮೀಪದ ಗುರುಪುರದಲ್ಲಿ ನಡೆದಿದೆ.

Join Our Whatsapp Group

ಕಲ್ಲಕಲಂಬಿ ನಿವಾಸಿ ಹರೀಶ್ ಶೆಟ್ಟಿ ಎಂಬವರ ಪುತ್ರಿ ಅಶ್ವಿನಿ ಶೆಟ್ಟಿ (21) ಮೃತ ಯುವತಿ. ಇವರು ಮಂಗಳೂರಿನ ಕಾಲೇಜಿನಲ್ಲಿ ಸಿಎ ವಿದ್ಯಾರ್ಥಿನಿಯಾಗಿದ್ದರು.

ಹರೀಶ್ ಶೆಟ್ಟಿ ಅವರು ತಮ್ಮ ಮನೆಯ ದನಗಳನ್ನು ಗದ್ದೆಯಲ್ಲಿ ಮೇಯಲು ಕಟ್ಟಲು ಹೋಗಿದ್ದರು. ಅವರ ಹಿಂದೆ ಮನೆಯ ಎರಡು ನಾಯಿಗಳು ಹೋಗಿದ್ದವು. ಮನೆಯ ನಾಯಿಗಳನ್ನು ತರಲೆಂದು ಅಶ್ವಿನಿ ಹೋಗಿದ್ದಾಗ ವಿದ್ಯುತ್ ತಂತಿ ಸ್ಪರ್ಶಗೊಂಡು ತೀವ್ರ ಅಸ್ವಸ್ಥರಾಗಿದ್ದರು.

ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಸ್ಪಂದಿಸದೆ ಅಶ್ವಿನಿ ಮೃತಪಟ್ಟಿದ್ದಾರೆ.