ಮನೆ ಕಾನೂನು ಸ್ಟೇಷನ್ ಬೇಲ್ ನೀಡಲು ಲಂಚ: ಇಬ್ಬರು ಕಾನ್‌ ಸ್ಟೇಬಲ್‌ ಲೋಕಾಯುಕ್ತ ಬಲೆಗೆ

ಸ್ಟೇಷನ್ ಬೇಲ್ ನೀಡಲು ಲಂಚ: ಇಬ್ಬರು ಕಾನ್‌ ಸ್ಟೇಬಲ್‌ ಲೋಕಾಯುಕ್ತ ಬಲೆಗೆ

0

ವಿಜಯಪುರ: ಗಲಾಟೆ ಪ್ರಕರಣದಲ್ಲಿ ಸ್ಟೇಷನ್ ಬೇಲ್ ನೀಡುವ ವಿಷಯದಲ್ಲಿ ಲಂಚ ಪಡೆದ ಇಬ್ಬರು ಪೊಲೀಸ್ ಕಾನ್‌ ಸ್ಟೇಬಲ್‌ ಗಳು ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

Join Our Whatsapp Group

ನಗರದ ಗೋಲಗುಂಬಜ ಠಾಣೆ ಪೇದೆಗಳಾದ ಜಟ್ಟೆಪ್ಪ ಬಿರಾದಾರ ಹಾಗೂ ಹನುಮಂತ ಪೂಜಾರಿ ಎಂಬ ಪೊಲೀಸ್ ಕಾನ್‌ ಸ್ಟೇಬಲ್‌ ಗಳು ಲಂಚ ಪಡೆದು ಲೋಕಾಯುಕ್ತರಿಂದ ಬಂಧಿಸಲ್ಪಟ್ಟವರು.

ಪ್ರಕರಣವೊಂದರಲ್ಲಿ ಜಗಳ ಮಾಡಿಕೊಂಡಿದ್ದ ಆರೋಪಿಗಳನ್ನು ಠಾಣಾ ಜಾಮೀನಿನ ಮೇಲೆ ಬಿಡಲು ಕಾನ್‌ ಸ್ಟೇಬಲ್‌ ಗಳಾದ ಜಟ್ಟೆಪ್ಪ ಹಾಗೂ ಹನುಮಂತ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು.

ಲಂಚ ಕೊಡಲು ಒಪ್ಪದ ದೂರುದಾರರು ಲೋಕಾಯುಕ್ತರಿಗೆ ದೂರು ನೀಡಿದ್ದರು. ಇದರಲ್ಲಿ 40 ಸಾವಿರ ರೂ. ಲಂಚ ಪಡೆಯುವಾಗ ಲಂಚ ಪಡೆದ ಪೊಲೀಸರನ್ನು ಬುಧವಾರ ಬಂಧಿಸಲಾಗಿದೆ.

ವಿಜಯಪುರ ಲೋಕಾಯುಕ್ತ ಎಸ್ಪಿ ಟಿ.ಮಲ್ಲೇಶ, ಡಿಎಸ್ಪಿ ಸುರೇಶರೆಡ್ಡಿ, ಸಿಪಿಐ ಆನಂದ ಠಕ್ಕನವರ, ಎ.ಎ.ಡೋಣಿ ನೇತೃತ್ವದಲ್ಲಿ ದಾಳಿ ನಡೆಸಿದ ಲೋಕಾಯುಕ್ತರು ಇಬ್ಬರೂ ಕಾನ್‌ ಸ್ಟೇಬಲ್‌ಗಳನ್ನು ಬಂಧಿಸಿದ್ದಾರೆ.