ಮನೆ ಅಪರಾಧ ಮನೆಗೆ ಬರಲ್ಲ ಎಂದ ಹೆಂಡತಿಯ ಮೇಲೆ ಆ್ಯಸಿಡ್ ಎರಚಿದ ಗಂಡ: ಆರೋಪಿ ಬಂಧನ

ಮನೆಗೆ ಬರಲ್ಲ ಎಂದ ಹೆಂಡತಿಯ ಮೇಲೆ ಆ್ಯಸಿಡ್ ಎರಚಿದ ಗಂಡ: ಆರೋಪಿ ಬಂಧನ

0

ಬಾಂದ್ರಾ: ಹೆಂಡತಿ ತನಗೆ ವಿಚ್ಛೇದನ ನೀಡಿದ್ದರ ಬಗ್ಗೆ ಅಸಮಾಧಾನಗೊಂಡ ಪತಿ ತನ್ನ ಹೆಂಡತಿಯ ಮೇಲೆ ಆ್ಯಸಿಡ್ ಎರಚಿರುವ ಘಟನೆ ಬಾಂದ್ರಾದ ಬೆಹ್ರಾಮ್ ಪದಾ ಪ್ರದೇಶದಲ್ಲಿ ಇಂದು ಮುಂಜಾನೆ ನಡೆದಿದೆ.

Join Our Whatsapp Group

 ಈ ಸಂಬಂಧ ನಿರ್ಮಲ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿಯನ್ನು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 2 ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.

ನಿರ್ಮಲ್ ನಗರ ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಸಂತ್ರಸ್ತೆಯ ಪತ್ನಿ ಕ್ಯಾಟರಿಂಗ್ ಕೆಲಸ ಮಾಡುತ್ತಿದ್ದರೆ, ಆಕೆಯ ಪತಿ ಆಟೋ ರಿಕ್ಷಾ ಚಾಲಕ ಮತ್ತು ಮದ್ಯವ್ಯಸನಿಯಾಗಿದ್ದ. 6 ವರ್ಷಗಳ ಹಿಂದೆ ವಿವಾಹವಾದ ಇಶ್ರತ್ ಶೇಖ್ ಮತ್ತು ಅಂಜುಮ್ ಶೇಖ್ ಬಾಂದ್ರಾ ಪೂರ್ವದ ಬೆಹ್ರಾಮ್ ಪದಾದಲ್ಲಿ ನೆಲೆಸಿದ್ದಾರೆ. ಇತ್ತೀಚೆಗೆ, ಅವರ ನಡುವೆ ಜಗಳ ಉಂಟಾಗಿತ್ತು. ಇದು ಬಾಂದ್ರಾ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನದ ಪ್ರಕರಣಕ್ಕೆ ಕಾರಣವಾಯಿತು. 5 ದಿನಗಳ ಹಿಂದೆ ನ್ಯಾಯಾಲಯವು ಅವರ ವಿಚ್ಛೇದನದ ತೀರ್ಪು ನೀಡಿತು.

 ‘ನೀನು ನನ್ನವಳಲ್ಲದಿದ್ದರೆ ಯಾರವಳೂ ಆಗಲು ಬಿಡುವುದಿಲ್ಲ’ ಎಂದು ಆತ ತನ್ನ ಪತ್ನಿಯ ಮೇಲೆ ಆಸಿಡ್ ಎರಚಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

 ಸೋಮವಾರ ಮುಂಜಾನೆ 5 ಗಂಟೆಗೆ ಅಂಜುಮ್ ಶೇಖ್ ಮತ್ತು ಅವರ 12 ವರ್ಷದ ಮಗ ರೈಸ್ ತಮ್ಮ ಮನೆಯ ಬಾಗಿಲಿನ ಬಳಿ ಕುಳಿತಿದ್ದಾಗ ಆಸಿಡ್ ದಾಳಿ ನಡೆದಿದೆ. ಇಶ್ರತ್ ಶೇಖ್ ಅವರ ಮೇಲೆ ಆಸಿಡ್ ಎರಚಿದರು, ಇದರ ಪರಿಣಾಮವಾಗಿ ಅಂಜುಮ್ ಅವರ ಬೆನ್ನು, ಹೊಟ್ಟೆ ಮತ್ತು ಕೈಗಳಿಗೆ ಸುಟ್ಟಗಾಯಗಳು ಉಂಟಾಗಿದ್ದರೆ ಮಗನ ಬೆನ್ನಿನ ಮೇಲೆ ಕೂಡ ಸುಟ್ಟ ಗಾಯಗಳಾಗಿವೆ. ಇಬ್ಬರಿಗೂ ಆರಂಭದಲ್ಲಿ ಭಾಭಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ನಂತರ ಚಿಂಚಪೋಕ್ಲಿಯ ಕಸ್ತೂರ್​ಬಾ ಆಸ್ಪತ್ರೆಗೆ ವರ್ಗಾಯಿಸಲಾಯಿತು.

ದಾಳಿಯ ನಂತರ ಅಂಜುಮ್ ಶೇಖ್ (24) ಮತ್ತು ರೈಸ್ ಶೇಖ್ (12) ಸ್ಥಿತಿ ಸ್ಥಿರವಾಗಿದೆ. ಆರೋಪಿ ಇಶ್ರತ್ ಶೇಖ್ ನನ್ನು ನಿರ್ಮಲ್ ನಗರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯ ಆತನನ್ನು ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ದಾಳಿಯ ನಂತರ ತಲೆಮರೆಸಿಕೊಂಡಿದ್ದ ಇಶ್ರತ್ ನನ್ನು ನಿನ್ನೆ ತಡರಾತ್ರಿ ನಿರ್ಮಲ್ ನಗರ ಪೊಲೀಸರು ಬಂಧಿಸಿದ್ದಾರೆ.