ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ನ್ಯಾಯಾಧೀಶ : ಪುನಃ ನೀನು ಇಲ್ಲಿಗೆ ಬಂದೆಯಾ? ಯಾರು ನಿನ್ನ ಇಲ್ಲಿಗೆ ಕರ್ಕೊಂಡು ಬಂದ್ರು?

 ವಾಸು : ಇಬ್ಬರು ಪೊಲೀಸ್ ಪೇದೆಗಳು, ಮಹಾಸ್ವಾಮಿ.

 ನ್ಯಾಯಾಧೀಶ : ಹಗಾದರೆ ಸಿಕ್ಕಾಪಟ್ಟೆ ಕುಡಿದಿರಬೇಕು?

 ವಾಸು : ನಿಮ್ಮಾತು ಸತ್ಯ ಮಹಾಸ್ವಾಮಿ.ಇಬ್ಬರು ಪೆದೆಗಳೂ ತುಂಬಾ ಕುಡಿದಿದ್ದರು.

Join Our Whatsapp Group

***

 ವೆಂಕಿ : ಲೋ ವಾಸು ಅದೇನು ನಿಮ್ಮನೆ ನಾಯಿ ನಾನು ಊಟ ಮಾಡುವುದನ್ನೇ ಒಂದೇ ಸಮ ದುರುಗುಟ್ಟಿ ನೋಡ್ತಾ ಇದೆ?

 ವಾಸು : ಅದು ತಿನ್ನೋ ತಟ್ಟೇಲ್ಲಿ ಬೇರೆಯವರು ಊಟ ಮಾಡೋದು ನೋಡುದ್ರೆ ಅದಕ್ಕೆ ಸಹಿಸೋಕೆ ಆಗೊಲ್ಲ.

***

 ಮಗ : ಅಪ್ಪಾ,ನನಗೆ ಅಲ್ಲಿರೋ ಪುಂಗಿ ಕೊಡ್ಸಪ್ಪ.

 ವಾಸು : ಅದು ಬೇಡ ಕಣೋ

 ಮಗ : ಈ ಯಾಕೆ ಕೊಡಸೊಲ್ಲ?

 ವಾಸು : ಅದು ನಿನಗೆ,ಕೊಡಿಸಿದ್ರೆ ಅದನ ಊದಿ ಊದಿ ನನಗೆ ತೊಂದ್ರೆ ಕೊಡ್ತೀಯ.

 ಮಗ : ನಾನು ನಿನಗೆ ಖಂಡಿತಾ ತೊಂದ್ರೆ ಕೊಡಲ್ಲಪ್ಪ. ಅದ್ನ ನೀನು ಮಲಗಿದ್ಳ ಮೇಲೆ ಊದುತ್ತೀನಿ.