ಮನೆ ಅಪರಾಧ ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ

ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ

0

ರಾಮನಗರ: “ನಾನು ಯಾರು ಗೊತ್ತಾ…? ಡಿಸಿಪಿ ಮಗ, ಸಿಎಂ‌ ಸಿದ್ದರಾಮಯ್ಯ ನನ್ನ ಸಂಬಂಧಿ” ಎಂದು ದರ್ಪ ತೋರಿದ ಯುವಕನೋರ್ವ ಸೆಕ್ಯುರಿಟಿ ಗಾರ್ಡ್ ಮೇಲೆ ಹಲ್ಲೆ ಮಾಡಿದ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

Join Our Whatsapp Group

ವರುಣ್ (21 ವ) ಎಂಬಾತನೇ ‌ಹಲ್ಲೆ ಮಾಡಿದ ಯುವಕ. ಪುನೀತ್ ಹಲ್ಲೆಗೊಳಗಾದ ಸೆಕ್ಯುರಿಟಿ ಗಾರ್ಡ್.

ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯ ದೊಡ್ಬೆಲೆಯ ಪ್ರಾವಿಡೆಂಟ್ ಸನ್ ವರ್ತ್ ಅಪಾರ್ಟ್‌ ಮೆಂಟ್‌ ನಲ್ಲಿ ಘಟನೆ ನಡೆದಿದೆ. ಯುವಕ ಅಪಾರ್ಟ್ಮೆಂಟ್ ಗೆ ಇಬ್ಬರು ಯುವತಿಯರನ್ನು ಕರೆತಂದಿದ್ದ. ರಾತ್ರಿ 12 ಗಂಟೆ ಬಳಿಕ ಮತ್ತೊಬ್ಬ ಅತಿಥಿಯನ್ನು ಕರೆ ತಂದಿದ್ದ. ರಾತ್ರಿ‌ 12 ಗಂಟೆಯ ಬಳಿಕ ಅಪರಿಚಿತರ ಪ್ರವೇಶ ಇಲ್ಲ ಎಂದ ಸೆಕ್ಯುರಿಟಿ ಗಾರ್ಡ್ ತಡೆದಿದ್ದ.

ಯುವತಿಯರ ಜೊತೆ ಬಂದಾಗ ಅನುಮಾನಗೊಂಡಿದ್ದಾಗಿ ಸೆಕ್ಯುರಿಟಿ ಗಾರ್ಡ್, ಅದಕ್ಕಾಗಿ ರಾತ್ರಿ ಅತಿಥಿಗಳ ಪ್ರವೇಶ ನಿರ್ಬಂಧ ಹೇರಿದ್ದ. ಅಪಾರ್ಟ್ಮೆಂಟ್ ರೂಲ್ಸ್ ಪ್ರಕಾರ ನಡೆದರೂ ಹಲ್ಲೆ ಮಾಡಿದ್ದಾರೆ ಎಂದು ಪುನೀತ್ ಆರೋಪಿಸಿದ್ದಾರೆ.

ಕಿವಿ ಪರದೆ ಹರಿದು ಹೋಗುವ ಹಾಗೆ ಹಲ್ಲೆ ಮಾಡಿದ್ದಾರೆ. ನನಗೆ ಈಗ ಕಿವಿ ಕೇಳಿಸುತ್ತಿಲ್ಲ ಎಂದು ಗಾರ್ಡ್‌ ಪುನೀತ್ ಪೊಲೀಸರಿಗೆ ದೂರು ನೀಡಿದ್ದಾರೆ.‌ ಅಲ್ಲೇ‌ ಇದ್ದ ಸ್ಥಳೀಯರು ಸೆಕ್ಯುರಿಟಿ ಗಾರ್ಡ್ ‌ಮೇಲೆ ಕಪಾಳ ಮೋಕ್ಷ ಮಾಡುವ ವಿಡಿಯೋ ರಿಕಾರ್ಡ್ ಮಾಡಿದ್ದಾರೆ.